ಭಾರತ, ಮೇ 2 -- ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ವೀಕ್ಷಕರಿಂದ ವಿನಂತಿ ಬಂದಾಗ ಖ್ಯಾತ ಗಾಯಕ ಸೋನು ನಿಗಮ್‌‌ ಅವರು "ಕನ್ನಡ... ಕನ್ನಡ... ಪೆಹಲ್ಗಾಮ್‌ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದಿರುವುದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಂಡ ಕೆಲವು ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಬಾಲಿವುಡ್‌ನಲ್ಲಿ ನೇಪೋಟಿಸಂ ಇದೆ. ಅಲ್ಲಿ ಗುಂಪುಗಾರಿಕೆ ಇದೆ. ಬೇರೆ ಭಾಷೆಯ ಹಾಡು, ಕಥೆಗಳನ್ನು ಡಬ್ ಮಾಡಿ ತಮ್ಮದಾಗಿಸಿಕೊಳ್ಳುವ ಕನ್ನಿಂಗ್ನೆಸ್ ಇದೆ. ಆದ್ರೆ ಅವರಲ್ಲಿ ಸೋನು ನಿಗಮ್ ನಂತಹ ಧಿಮಾಕಿನ ಮನುಷ್ಯನನ್ನು ಹೊರದಬ್ಬುವ ಗುಣವು ಇದೆ. ನಾನೇ ಶ್ರೇಷ್ಠ, ನಾನೇ ಶ್ರೇಷ್ಠ ಎನ್ನುವ ಶ್ರೇಷ್ಠತೆಯ ವ್ಯಸನ ತಲೆಗೇರಿದ ಮೇಲೆ ಬಾಲಿವುಡ್ ಇವನನ್ನು ಮುಲಾಜಿಲ್ಲದೆ ಹೊರದಬ್ಬಿತ್ತು.

ಅರಿಜಿತ್ ಸಿಂಗ್, ಜುಬಿನ್, ಅರ್ಮಾನ್ ಮಲಿಕ್, ವಿಶಾಲ್ ಮಿಶ್ರ, ಅಮಿತ್ ತಿ...