ಭಾರತ, ಏಪ್ರಿಲ್ 5 -- ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಬಹಳ ಕ್ರಿಯಾಶೀಲರು. ನಾನಾ ರೀತಿಯಲ್ಲಿ ಅವರು ತಮ್ಮ ಕುಟುಂಬದ ಆದಾಯ ಹೆಚ್ಚಿಸುವುದಕ್ಕೆ ಕೆಲಸ ಮಾಡುತ್ತಿರುವುದು ಎಲ್ಲರ ಗಮನದಲ್ಲಿಯೂ ಇರುವಂಥದ್ದೇ. ಅಂತಹ ಸ್ತ್ರೀಶಕ್ತಿ ಸ್ವಸಹಾಯ ಸಂಘದವರಿಗೆ ಅದ್ಭುತ ವ್ಯಾಪಾರ ಅವಕಾಶವನ್ನು ವೀರಲೋಕ ಬುಕ್ಸ್ ಘೋಷಿಸಿದೆ.
ತಮ್ಮ ಫೇಸ್ಬುಕ್ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಕನ್ನಡ ಪುಸ್ತಕ ಮಾರಾಟ ಜಾಲದ ಬಗ್ಗೆ ಪ್ರಸ್ತಾಪಿಸಿದ ವೀರಲೋಕ ಬುಕ್ಸ್ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ಅವರು, ಪೆಪ್ಪರ್ಮೆಂಟ್ ಪ್ರತಿ ಊರು ಊರುಗಳಿಗೂ ತಲುಪುತ್ತದೆ. ಅದಕ್ಕೊಂದು ಪೂರೈಕೆ ಮತ್ತು ಮಾರಾಟ ಜಾಲ ಇದೆ. ಆದರೆ ಕನ್ನಡ ಪುಸ್ತಕಕ್ಕೆ ಅಂತಹ ಮಾರಾಟ ಜಾಲ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಯಾರು ಕೊಂಡು ಓದ್ತಾರೆ ಎಂದು ಮೂಗು ಮುರಿಯುವ ಕಾಲದಲ್ಲಿ ಕನ್ನಡ ಸಾಹಿತ್ಯ ಪುಸ್ತಕಗಳ ಮಾರಾಟದಿಂದಲೇ ಎರಡು ವರ್ಷದ ವೀರಲೋಕ ಬುಕ್ಸ್ ಕಳೆದ ವರ್ಷ (2024-25) 1.32 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳ...
Click here to read full article from source
To read the full article or to get the complete feed from this publication, please
Contact Us.