ಭಾರತ, ಮೇ 12 -- ದೇಶದ ಎಲ್ಲ ತಾಯಂದಿರು, ಹೆಣ್ಣುಮಕ್ಕಳಿಗೆ ಆಪರೇಷನ್ ಸಿಂದೂರ ಸಮರ್ಪಿತ; ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ ಮಾತಿದು.

ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುವುದಿದ್ದರೆ ಅದು ಭಯೋತ್ಪಾದನೆಯ ಬಗ್ಗೆ, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ನಡೆಯುತ್ತದೆ. ಭಾರತದ ನಿಲುವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು - ನರೇಂದ್ರ ಮೋದಿ.

ಸೋದರಿಯರ ಸಿಂದೂರ ಅಳಿಸಿದವರನ್ನು ಅಳಿಸಿ ಹಾಕಿದ್ದೇವೆ. ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ್ದೇವೆ. ನಮ್ಮ ಶಕ್ತಿ ಏನೆಂದು ಜಗತ್ತಿಗೆ ಗೊತ್ತಾಗಿದೆ - ನರೇಂದ್ರ ಮೋದಿ

ಕಾರ್ಯಾಚಾರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸಂಘರ್ಷ ನಿಂತಿಲ್ಲ. ಅಣ್ವಸ್ತ್ರದ ಬ್ಲಾಕ್​​ಮೇಲ್​ಗೆ ನಾವು ಬಗ್ಗುವುದಿಲ್ಲ - ನರೇಂದ್ರ ಮೋದಿ

ಸಿಂದೂರ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ. ಅವರು ಕನಸಿನಲ್ಲಿಯೂ ಯೋಚಿಸದ ರೀತಿಯಲ್ಲಿ ಪ್ರತಿಕಾರ ತೀರಿಸಿದ್ದೇವೆ - ಪ್ರಧಾನಿ ಮೋದಿ

ನಮ್ಮ ಸೋದರಿಯರ ಸಿಂದೂರ ಅಳಿಸಿದವರನ್ನು ಉಳಿಸಲಿಲ್ಲ. ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನೇ ನಮ್ಮ ಕ್ಷಿಪಣಿಗಳು ಅಳಿಸಿ ಹಾಕ...