ಭಾರತ, ಮಾರ್ಚ್ 29 -- Beware of Cyber Fraud: ಸೈಬರ್ ವಂಚಕರ ಸತತ ಕಿರುಕುಳದಿಂದ ಬೇಸತ್ತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಬೀಡಿ ಗ್ರಾಮದ ವೃದ್ಧ ದಂಪತಿ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಪತ್ನಿ ಗುರುವಾರ ರಾತ್ರಿ ನಿದ್ದೆ ಮಾತ್ರೆ ಸೇವಿಸಿದ್ದು ಮಲಗಿದಲ್ಲೇ ಮೃತಪಟ್ಟ ಸ್ಥಿತಿಯಲ್ಲಿ, ಪತಿ ಚಾಕುವಿನಿಂದ ತಮ್ಮ ಕುತ್ತಿಗೆಗೆ ಚುಚ್ಚಿಕೊಂಡು ಮನೆ ಹಿಂಭಾಗದ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಬೀಡಿಯ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾದ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ಡಿಯಾಗೋ ನಜರತ್ (78) ಎಂದು ಗುರುತಿಸಲಾಗಿದೆ.
ಖಾನಾಪುರ ತಾಲೂಕು ಬೀಡಿ ಗ್ರಾಮದ ಕ್ರಿಶ್ಚಿಯನ್ ಓಣಿಯ ಡಿಯಾಗೋ ನಜರತ್ ಮತ್ತು ಪ್ಲೇವಿಯಾ ದಂಪತಿ ಸೈಬರ್ ವಂಚಕರ ಕಾಟ ಅನುಭವಿಸಿದ್ದರು. ಜನವರಿಯಿಂದಲೇ ಅವರಿಗೆ ಸೈಬರ್ ವಂಚಕರ ಕಾಟ ಶುರುವಾಗಿತ್ತು ಎಂಬ ಅಂಶ ಅವರು ಬರೆದಿಟ್ಟ ಡೆತ್ನೋಟ್ ಮೂಲಕ ಬಹಿರಂಗವಾಗಿದೆ. ಡಿಯಾಗೋ ಅವರು ಮಹಾರಾಷ್ಟ್ರದಲ್ಲಿ ಬಿಎ...
Click here to read full article from source
To read the full article or to get the complete feed from this publication, please
Contact Us.