ಭಾರತ, ಮೇ 21 -- ಭಾಗ್ಯಮ್ಮನಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದಾರೆ. ಅಜ್ಜಿಯನ್ನು ಬಾಳೆ ಎಲೆಯ ಮೇಲೆ ಮಲಗಿಸಿ ತಲೆಯ ಮೇಲೆ ಎಣ್ಣೆ ತೊಟ್ಟುಕ್ಕುವುದನ್ನು ಲಚ್ಚಿ ಆಶ್ಚರ್ಯದಿಂದ ನೋಡುತ್ತಾ ಇದ್ದಾಳೆ. "ರಕ್ತ ಸಂಚಾರ ಸುಗಮವಾಗಿ ಹೋಗಲು ಈ ರೀತಿ ಚಿಕಿತ್ಸೆ ನೀಡುತ್ತಾರೆ" ಎಂದು ಸೃಜನ್‌ ಹೇಳುತ್ತಾನೆ. ಇನ್ನೊಂದಡೆ ಲಕ್ಕಿ ಲಕ್ಷ್ಮಿಕಾಂತ್‌ ಚಿಂತೆಯಲ್ಲಿದ್ದಾನೆ. "ನಮ್ಮ ನಂಬರ್‌ ಹೇಗೆ ಸಿಕ್ತು. ನೀನು ಬೇರೆ ನನ್ನ ನಂಬರ್‌ ನೀಡಿದ್ದೀಯ. ಆ ಕಿರಾತಕಿ ನನಗೆ ಕಾಲ್‌ ಮಾಡ್ತಾಳೆ. ನನ್ನ ಕಥೆ ಅಷ್ಟೇ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಭಾಗ್ಯಮ್ಮನ ಎಲ್ಲೋ ಆಸ್ಪತ್ರೆಗೆ ಸೇರಿಸಿದ್ದಾರೆ" ಎಂದೂ ಹೇಳುತ್ತಾನೆ. "ಅವಳು ಎಲ್ಲಿಗೆ ಹೋದರೂ ಕೊನೆಗೆ ನಮ್ಮ ಬುಟ್ಟಿಗೆ ಬೀಳ್ತಾಳೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ನನಗೂ ಇದನ್ನು ನೋಡಿ ಸಾಕಾಗಿದೆ. ನಾವಿಬ್ಬರೂ ಎಲ್ಲಾದರೂ ಹೋಗೋಣ" ಎಂದು ಶಕುಂತಲಾದೇವಿ ಹೇಳುತ್ತಾರೆ. ಒಟ್ಟಾರೆ, ಗೌತಮ್‌ ಮನೆ ಖಾಲಿಯಾಗುತ್ತಿದೆ. ದಿಯಾಳನ್ನು ಮನೆಗೆ ಕರೆಸಿಕೊಳ್ಳಲು ಜೈದೇವ್‌ಗೆ ವೇದಿಕೆ ಸಿದ್ಧವಾಗುತ್ತಿದ...