ಭಾರತ, ಏಪ್ರಿಲ್ 1 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಟಿಆರ್‌ಪಿಯಲ್ಲಿ ಸತತ ಕುಸಿತ ಕಾಣುತ್ತಿದೆ. ಕೆಲವು ದಿನಗಳಿಂದ ಸಿಹಿ-ಸುಬ್ಬಿ ಕಥೆಯನ್ನು ಎಳೆದಾಡುತ್ತಿದ್ದು, ಪ್ರೇಕ್ಷಕರಿಗೆ ಬೇಸರ ಮೂಡಿದೆ. ಸಿಹಿ ಸಾವಿನ ನಂತರ ಸೀತಾರಾಮ ಧಾರಾವಾಹಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಧಾರಾವಾಹಿಯಲ್ಲೊಂದು ಬಿಗ್ ಟ್ವಿಸ್ಟ್ ಸಿಗುವ ಸೂಚನೆ ಸಿಕ್ಕಿದೆ. ಇನ್ನಾದ್ರೂ ಭಾರ್ಗವಿ ಮುಖವಾಡ ಕಳಚುತ್ತಾ ಎಂಬ ಪ್ರಶ್ನೆ ಕೇಳ್ತಿದ್ದಾರೆ ಸೀರಿಯಲ್ ಪ್ರೇಕ್ಷಕರು.

ಇಂದಿನ ಪ್ರೋಮೊದಲ್ಲಿ ಸತ್ಯ ಚಿಕ್ಕಪ್ಪ ಅಪ್ಪನ ಎದುರು ತಾನು ವಾಣಿ ಅತ್ತಿಗೆ ಸಾವಿಗೆ ಕಾರಣ ಅಲ್ಲ ಎಂದು ಹೇಳ್ತಾರೆ, ಈ ಕಡೆ ಸ್ಟೋರ್‌ ರೂಮ್‌ನಲ್ಲಿ ಶ್ರೀರಾಮ್‌ ದೇಸಾಯಿಗೆ ವಿಂಟೇಜ್ ಕ್ಯಾಮೆರಾ ಒಂದು ಕಣ್ಣಿಗೆ ಬೀಳುತ್ತೆ. ಸತ್ಯ ಮುಚ್ಚಿಟ್ಟು ಒಳ್ಳೆತನ ಮುಖವಾಡ ಹಾಕಿರುವ ಭಾರ್ಗವಿ ಮುಖವಾಡ ಇನ್ನಾದ್ರೂ ಕಳಚಬಹುದು ಎಂದು ಈ ಪ್ರೊಮೊ ನೋಡಿದವರು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಕೆಲವು ಸೀರಿಯಲ್ ಅಭಿಮಾನಿಗಳು ಇಷ್ಟು ಬೇಗ ಸತ್ಯ ಗೊತ್ತಾ...