ಭಾರತ, ಮೇ 21 -- ಸೀತಾರಾಮ ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ. ಸೀರಿಯಲ್‌ನ ಕಲಾವಿದರು ಕೊನೆಯ ದಿನದ ಶೂಟಿಂಗ್‌ ಮುಗಿಸಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ, ಸುದೀರ್ಘ ಟಿಪ್ಪಣಿಯನ್ನೂ ಹಂಚಿಕೊಂಡಿದ್ದಾರೆ. ನಿನ್ನೆ (ಮೇ 20) ಸೀರಿಯಲ್‌ನ ಕೊನೆಯ ಶೂಟಿಂಗ್‌ ಮುಗಿದಿದೆ. ಇನ್ನು ಕೆಲವೇ ದಿನದಲ್ಲಿ ಈ ಸೀರಿಯಲ್‌ ಚಾನೆಲ್‌ನಲ್ಲಿ ಶುಭಂ ಆಗಲಿದೆ. ಕೊನೆಯ ದಿನದ ಶೂಟಿಂಗ್‌ ಫೋಟೋದಲ್ಲಿ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ.ಎಸ್‌. ಕಲಾ ಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು ಮುಂತಾದವರು ಇದ್ದಾರೆ. ಜತೆಗೆ, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರೂ ಕೊನೆಯ ದಿನದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು, ಫೋಟೋಗೆ ಪೋಸ್‌ ನೀಡಿದ್ದಾರೆ.

ಸೀತಾ ರಾಮ " ಧಾರಾವಾಹಿಯ ಕಡೆಯ ದಿನದ ಶೂಟಿಂಗ್ನಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಜೀ ವಾಹಿನಿಯಿಂದ ಪ್ರೀತಿಯ ಗೌರವ. ಧನ್ಯವಾದಗಳು ಜೀ ವಾಹಿನಿಗೆ ನನಗೂ ಅರಿವಿರದ ಕಲಾವಿದೆಗೆ ಅದ್ಭುತ ಅವಕಾಶವಿಟ್ಟು ಅದ್ಭ...