Bangalore, ಮೇ 15 -- ಕಾಂತಾರ ತಂಡದ ಕಲಾವಿದರ ಸಾವಿಗೆ ಕಾಂತಾರ ತಂಡ ಪ್ರತಿಕ್ರಿಯಿಸುವ ರೀತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಸಮಯದಲ್ಲಿ ಕಾಂತಾರ ಚಿತ್ರದಲ್ಲಿ ನಟಿಸುವ ಕಲಾವಿದರನ್ನು ಚಿತ್ರತಂಡ ಹೇಗೆ ನೋಡಿಕೊಳ್ಳುತ್ತಿದೆ ಎಂಬ ಭಾವವೂ ಜನರ ಮನದಲ್ಲಿ ಮೂಡುತ್ತಿದೆ.

ಇದಕ್ಕೆ ತುಪ್ಪ ಸುರಿಯುವಂತೆ ಕಾಂತಾರ ನಟನ ಸಾವಿನ ಸುದ್ದಿಗೆ ಕುಹಕ ನಗೆ ಬೀರಿದ ಪ್ರಮೋದ್‌ ಶೆಟ್ಟಿಯ ವರ್ತನೆಯ ಬಗ್ಗೆಯೂ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಕಾಂತಾರ ನಟನ ಸಾವಿನ ಸುದ್ದಿಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರಮೋದ್‌ ಶೆಟ್ಟಿ ನಗುತ್ತಾ ಉತ್ತರಿಸಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.

ʻಕಾಂತಾರ ಚಾಪ್ಟರ್‌ 1ʼ ಸಿನಿಮಾ ಶೂಟಿಂಗ್‌ ಮುಗಿಸಿ, ಆಪ್ತರ ಮದುವೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದ ರಾಕೇಶ್‌ ಮೇ 12ರಂದು ಮೃತಪಟ್ಟಿದ್ದರು. ಹೃದಯಘಾತದಿಂದ ಈ ಹಾಸ್ಯ ನಟ ಇನ್ನಿಲ್ಲ ಎಂದಾದಗ ಎಲ್ಲರೂ ಮರುಗಿದ್ದರು. ರಕ್ಷಿತಾ, ಅನುಶ್ರೀ ಸೇರಿದಂತೆ ಅನೇಕ ಆತ್ಮೀಯರು, ಪ್ರಮುಖ ಕಲಾವಿದರು ನೂರಾರು ಕಿ.ಮೀ. ದೂರದಿಂದ...