Bangalore, ಮೇ 23 -- ಅಮೃತಧಾರೆಯಲ್ಲಿ ಕಳೆದ ಹಲವು ಸಂಚಿಕೆಗಳಿಂದ ಪಂಕಜಾಳ ರಹಸ್ಯ ಕಂಡುಹಿಡಿಯುವ ಪ್ರಯತ್ನವನ್ನು ಭೂಮಿಕಾ ಮಾಡುತ್ತಿದ್ದಾರೆ. ಆನಂದ್‌ ಕೂಡ ಈಕೆಗೆ ಸಾಥ್‌ ನೀಡುತ್ತಿದ್ದಾರೆ. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೇ ಎಂಬ ಅನುಮಾನ ಭೂಮಿಕಾಳಿಗೆ ಬಂದಿದೆ.

ಶಕುಂತಲಾದೇವಿಯ ಕೋಣೆಯೊಳಗೆ ಪಂಕಜಾ ಎಂಬ ಹೆಸರಿನ ಜನನ ಪ್ರಮಾಣ ಪತ್ರ ದೊರಕಿತ್ತು. ಇದನ್ನು ನೋಡಿದ ಬಳಿಕ ಭೂಮಿಕಾಗೆ ಅನುಮಾನ ಬಂದಿದೆ. ಪಂಕಜಾಳ ಜನನ ಪ್ರಮಾಣ ಪತ್ರದಲ್ಲಿರುವ ಊರಿನಲ್ಲಿ ವಿಚಾರಿಸಿದ್ದಾರೆ.

ಆ ಸಮಯದಲ್ಲಿ ನಂಜಮ್ಮ ಎಂಬ ಮಹಿಳೆ ಫೋನ್‌ ಮಾಡಿದ್ದಳು. ಶಕುಂತಲಾದೇವಿ ಆಕೆಯೊಂದಿಗೆ ಮಾತನಾಡಿ ಕನಕಪುರದ ಬಳಿ ಭೇಟಿಯಾಗಿದ್ದರು.

ನಂಜಮ್ಮನಿಗೆ ಕೊಂಚ ಹಣ ನೀಡಿ ಆಕೆಯ ಬಾಯಿ ಮುಚ್ಚಿಸಿದ್ದರು.

ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಅದೇ ಊರಿಗೆ ಹೋಗಿದ್ದಾರೆ. ಫ್ಯಾಕ್ಟರಿ ವಿಸಿಟ್‌ ನೆಪದಲ್ಲಿ ಗೌತಮ್‌ನನ್ನೂ ಕರೆದುಕೊಂಡು ಆನಂದ್‌ ಹೋಗಿದ್ದರು. ಆನಂದ್‌, ಅಪರ್ಣಾ, ಗೌತಮ್‌, ಭೂಮಿಕಾ ಅಲ್ಲಿದ್ದರು. ಆ ಸಮಯದಲ್ಲಿ ಭೂಮಿಕಾ ಮತ್ತು ಆನಂದ್‌ಗೆ ನಂಜಮ್ಮನ ...