ಭಾರತ, ಮೇ 7 -- ಆಪರೇಷನ್ ಸಿಂಧೂರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ದಾಳಿ ವೇಳೆ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ, ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ಭಾರತ ಸರ್ಕಾರ ಬುಧವಾರ (ಮೇ 7) ನಸುಕಿನ ವೇಳೆ ತಕ್ಕ ಪ್ರತ್ಯುತ್ತರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಿಗಾದಲ್ಲೇ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ನಿಶ್ಚಿತ 9 ಉಗ್ರ ನೆಲೆ (ಉಗ್ರ ತಾಣ)ಗಳ ಮೇಲೆ ಭಾರತ ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ ಭಾರತ ಆಪರೇಷನ್ ಸಿಂಧೂರ ಎಂಬ ಹೆಸರನ್ನೂ ಇಟ್ಟಿದೆ.

ಭಾರತ ನಡೆಸಿದ ದಾಳಿಯು ನಿಶ್ಚಿತವಾದ ಅಂದರೆ ಕೇಂದ್ರೀಕೃತ ಹಾಗೂ ಅಳೆದು ತೂಗಿದ ಪ್ರಚೋದನಕಾರಿಯಲ್ಲದ ಭಯೋತ್ಪಾದನಾ ನೆಲೆಗಳ ಮೇಲಿನ ದಾಳಿ ಎಂಬುದನ್ನು ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT Digital Content Services with permission from HT Kannada....