ಭಾರತ, ಮೇ 17 -- ಬೆಂಗಳೂರು: ಮನೆ ಬಾಗಿಲಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ( ಎನ್‌ ಸಿಡಿ) ಪತ್ತೆ ಹಚ್ಚಿ ಔಷಧಗಳನ್ನು ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹ ಆರೋಗ್ಯ' ಯೋಜನೆಗೆ ಈ ಮಾಸಾಂತ್ಯದಲ್ಲಿ ಮೈಸೂರಿನಿಂದ ಚಾಲನೆ ನೀಡಲಾಗುತ್ತದೆ. ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ, ಮೈಸೂರು ಜಿಲ್ಲಾ ಎನ್‌ ಸಿಡಿ ನಿಯಂತ್ರಣಾಧಿಕಾರಿ ಡಾ. ಡಿ.ಜಿ. ನಾಗರಾಜ್‌ ಈ ಮಾಹಿತಿ ನೀಡಿದ್ದಾರೆ.

ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎನ್‌ ಸಿಡಿ ರೋಗಗಳನ್ನು ಪತ್ತೆ ಹಚ್ಚಿ ಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ನಿಯತವಾಗಿ ತಪಾಸಣೆಗೊಳಪಡಿಸಲಾಗುತ್ತದೆ ಮತ್ತು ನಿಯಂತ್ರಣಕ್ಕೆ ತರಲಾಗುತ್ತದೆ. ಇದರಿಂದ ರೋಗಗಳು ಉಲ್ಬಣವಾಗುವುದನ್ನು ಮತ್ತು ಅಕಾಲಿಕ ಮರಣವನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಗೃಹ ಆರೋಗ್ಯ ಯೋಜನೆಗೆ ರಾಜ್ಯ ಸರ್ಕಾರ 92.75 ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಈಗಾಗಲೇ ಸ್ತನ ಕ್ಯಾನ್ಸರ್‌, ಅಲ್ಸರ್‌, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಬ...