Bengaluru, ಮೇ 6 -- ಮಂಗಳೂರು: ಕೆಲವು ಕಿಡಿಗೇಡಿಗಳು, ಸಮಾಜಘಾತುಕರು ಶಾಂತವಾಗಿದ್ದ ಮಂಗಳೂರನ್ನು ಕದಡಿಹಾಕಿ, ಮನುಷ್ಯ, ಮನುಷ್ಯನ ನಡುವೆ ಭೀತಿ ಹುಟ್ಟಿಸಿದ್ದರ ಪರಿಣಾಮವನ್ನು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಅನುಭವಿಸಬೇಕಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಮಂಗಳೂರು ಕಳಾಹೀನವಾಗುತ್ತಿದ್ದು, ಜಿಲ್ಲೆಯ ಇತರ ತಾಲೂಕು ಕೇಂದ್ರಗಳೂ ವ್ಯಾಪಾರ ವಹಿವಾಟುಗಳು ಕಡಿಮೆಯಾಗಿ ಬಾಗಿಲು ಹಾಕುತ್ತಿವೆ. ಮಂಗಳೂರು ನಗರಕ್ಕೆ ಕೆಲವೇ ಕೆಲವು ಕಿಡಿಗೇಡಿಗಳಿಂದ ಕೆಟ್ಟ ಹೆಸರು ಬರುತ್ತಿದೆ. ಆದರೆ ಅದೇ ಕಾರಣವನ್ನು ಮುಂದಿಟ್ಟು ಜನರಲ್ಲಿ ಭಯ ಹುಟ್ಟಿಸುವುದು ಯಾಕೆ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ. ಪೊಲೀಸರೇ ಗಲಾಟೆ ಆಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಅಂಗಡಿ ಬಾಗಿಲು ಹಾಕಿಸುತ್ತಿದ್ದಾರೆ ಎಂಬುದು ಅವರ ದೂರು.

ಯಾವುದೇ ಅಹಿತಕರ ಘಟನೆ ಆದರೆ, ಮುಂಜಾಗರೂಕತಾ ಕ್ರಮವಾಗಿ ಬಂದ್ ಮಾಡಿಸಲಿ. ಆದರೆ, ಮತ್ತೆ ನಗರ ಸಹಜ ಸ್ಥಿತಿಗೆ ಬಂದಾಗಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕೇ ವಿನಃ ಅಂಗಡಿ ಬಂದ್ ಮಾಡಿಸಬಾರದು ಎಂದು ವ...