ಭಾರತ, ಮೇ 27 -- ಕರ್ನಾಟಕ ಸರ್ಕಾರದ ಲೂಟಿ ಕಾರ್ಯಕ್ರಮಕ್ಕೆ ಮಂಡ್ಯದಲ್ಲಿ ಹಸುಗೂಸೊಂದು ಪ್ರಾಣ ಕಳೆದುಕೊಂಡಿದೆ. ನಾವಿದಕ್ಕೆ ಸಂಚಾರ ಪೊಲೀಸರನ್ನು ಬೈದು ಕೋಪ ತಣಿಸಿಕೊಳ್ಳುತ್ತಿದ್ದೇವೆ. ನಮ್ಮ ಆಕ್ರೋಶವನ್ನು ಶಮನಗೊಳಿಸುವ ಔಷಧಿಯನ್ನು ನಮ್ಮ ಘನ ಸರ್ಕಾರ ಸಿದ್ಧಪಡಿಸಿಕೊಂಡು ಕುಳಿತಿದೆ. ಹೀಗಾಗಿ ಮಾನವೀಯತೆ ಇಲ್ಲದ ಮೂವರು ಎಎಸ್‌ಐಗಳನ್ನು ಅಮಾನತು ಮಾಡಿ, ನಮಗೆ ಚೆಂದದ ಟೋಪಿಯನ್ನು ಹಾಕಿ ಮತ್ತೆ ಲೂಟಿ ಕಾರ್ಯಕ್ರಮ ಮುಂದುವರಿಸುತ್ತಾರೆ. ಆದರೆ ಇಂತಹ ಅಮಾನೀಯ ಘಟನೆಗಳಿಗೆ ಮೂಲ ಕಾರಣ ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ. ಆದರೆ ಪ್ರಜ್ಞಾವಂತರೆನಿಸಿಕೊಂಡವರು ಕೂಡ ಸರ್ಕಾರದ ಗೂಗ್ಲಿಗೆ ಕ್ಲೀನ್‌ ಬೌಲ್ಡ್‌ ಆದರೆ ಕಷ್ಟವಾದೀತು. ಮಂಡ್ಯದ ಹೃದಯ ವಿದ್ರಾವಕ ಘಟನೆಯ ಜತೆಗೆ ಒಮ್ಮೆ ಇಡೀ ರಾಜ್ಯವನ್ನು ನೆನಪಿಸಿಕೊಳ್ಳಿ ಹಾಗೂ ಕಳೆದೊಂದು ದಶಕಗಳ ವಿವಿಧ ಘಟನೆಯನ್ನು ಒಮ್ಮೆ ಅವಲೋಕಿಸಿ. ಆಗ ಸರ್ಕಾರದ ಬಣ್ಣ-ಬಣ್ಣದ ಎಷ್ಟು ಟೋಪಿ ನಮ್ಮ ತಲೆಯ ಮೇಲಿದೆ ಎನ್ನುವುದು ಗೊತ್ತಾಗುತ್ತದೆ.

ಮಂಡ್ಯದಲ್ಲಿನ ಘಟನೆಗೆ ಮೂಲ ಕಾರಣವಾಗಿದ್ದು ಸಂಚಾರ ಪೊಲೀಸರ ...