ಭಾರತ, ಮೇ 4 -- ಶ್ರೀಕೃಷ್ಣನಿಗೆ ಕನ್ನಯ್ಯ, ಗೋಪಾಲ, ವಾಸುದೇವ, ಪಾಂಡುರಂಗ, ಮಧುಸೂದನ ಹೀಗೆ ಹಲವಾರು ಹೆಸರುಗಳಿವೆ. ಸನಾತನ ಧರ್ಮದಲ್ಲಿ ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಕೃಷ್ಣ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಜನಿಸುತ್ತಾನೆ. ಹಿಂದೂಗಳಲ್ಲಿ ಹಲವರು ಶ್ರೀಕೃಷ್ಣನ ಪರಮಭಕ್ತರು. ಕೃಷ್ಣನನ್ನು ಆರಾಧ್ಯ ದೈವವಾಗಿ ಪೂಜಿಸುತ್ತಾರೆ. ಆದರೆ ಗೋಪಿಲೋಲನಿಗೆ ಕೆಲವು ರಾಶಿಯವರ ಮೇಲೆ ವಿಶೇಷ ಒಲವು. ಆ ರಾಶಿಗೆ ಸೇರಿದವರು ಎಂದರೆ ಅವನಿಗೆ ಅಚ್ಚುಮೆಚ್ಚು.

ಅಂತಹವರಿಗೆ ಯಾವಾಗಲೂ ಶ್ರೀಕೃಷ್ಣನ ಅನುಗ್ರಹವಿರುತ್ತದೆ. ಶ್ರೀಕೃಷ್ಣ ಪರಮಾತ್ಮನ ದೆಸೆಯಿಂದ ಅವರ ಬಾಳಿನಲ್ಲಿ ಯಾವಾಗಲೂ ಸುಖ, ಸಂತೋಷ, ಸಮೃದ್ಧಿ ತುಂಬಿರುತ್ತದೆ. ಹಾಗಾದರೆ ಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು ಯಾರು ಎಂಬುದನ್ನು ನೋಡೋಣ.

ಶ್ರೀಕೃಷ್ಣನಿಗೆ ಕಟಕ ರಾಶಿಯವರೆಂದರೆ ಬಹಳ ಪ್ರೀತಿ. ಈ ರಾಶಿಚಕ್ರದ ಅಡಿಯಲ್ಲಿ ಜನಿಸಿದವರು ಅದೃಷ್ಟವಂತರು ಎಂದು ಹೇಳಬಹುದು. ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೃಷ್ಣ ಪರಮಾತ್ಮನ ಆಶೀರ್ವಾದ ಯಾವಾಗಲೂ ಇರುತ್ತದೆ. ಕೃಷ್ಣನ ಕೃಪೆಯಿಂದ...