ಭಾರತ, ಏಪ್ರಿಲ್ 22 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 21ರ ಸಂಚಿಕೆಯಲ್ಲಿ ವಿಶಾಲಾಕ್ಷಿ-ಶ್ರಾವಣಿ ಅಡುಗೆ ಮನೆಯಲ್ಲಿ ನಿಂತು ಕಾಫಿ ಕುಡಿಯುತ್ತಿರುವಾಗ ಅಲ್ಲಿಗೆ ಬರುವ ಧನಲಕ್ಷ್ಮೀ ಅಮ್ಮ ಸೊಸೆಯ ಜೊತೆ ಒಳ್ಳೆ ರೀತಿಯಲ್ಲಿ ಇರುವುದು ಕಂಡು ಉರಿದು ಬೀಳುತ್ತಾಳೆ. ಆದರೆ ತಕ್ಷಣ ಪ್ಲೇಟ್ ಚೇಂಜ್ ಮಾಡುವ ವಿಶಾಲು 'ಅಯ್ಯೋ ಇದು ಒಂದು ಕಾಫಿನಾ, ಬೆಳಿಗ್ಗೆ ಬೆಳಿಗ್ಗೆ ಈ ಕಾಫಿ ಕುಡಿದು ನನ್ನ ಬಾಯೆಲ್ಲಾ ಹಾಳಾಯ್ತು. ಕಾಫಿ ಮಾಡೋದು ಹೇಗೆ ಅಂತ ನನ್ನ ಮಗಳಿಂದ ಕಲಿಬೇಕು' ಎಂದು ಧನಲಕ್ಷ್ಮೀಯನ್ನು ಹೊಗಳಿ ಅಟ್ಟಕ್ಕೇರಿಸುವುದು ಮಾತ್ರವಲ್ಲ, ಅವಳೆದುರು ಶ್ರಾವಣಿಯನ್ನು ಬೈದು, ನಂತರ ಅಡ್ಡ ಹೋಗಿ ಸಾರಿ ಕೇಳುತ್ತಾಳೆ. ಇತ್ತ ಧನಲಕ್ಷ್ಮೀಗೆ ಅಮ್ಮ ಹಾಗೂ ಶ್ರಾವಣಿ ಒಂದಾಗಿಲ್ಲ ಅನ್ನೋದು ಖುಷಿ ನೀಡುತ್ತೆ.
ವರದ ಬೆಳಿಗ್ಗೆ ಆಫೀಸ್ಗೆಂದು ಹೊರಟಾಗ ಅವನಿಗೆ ವಾಲೆಟ್, ಕರ್ಚೀಫ್, ಮೊಬೈಲ್ ಎಲ್ಲವನ್ನೂ ರೆಡಿ ಮಾಡಿಕೊಡುತ್ತಾಳೆ ವರಲಕ್ಷ್ಮೀ. ಚೆನ್ನಾಗಿ ಓದಿಕೊಂಡಿದ್ದ ವರಲಕ್ಷ್ಮೀ ತನ್ನನ್ನು ಮದುವೆಯಾಗಿ ಈ ಮನೆಯಲ್ಲಿ ಕೆಲಸ ಮಾಡಿಕೊಂಡು ಇರೋ...
Click here to read full article from source
To read the full article or to get the complete feed from this publication, please
Contact Us.