ಭಾರತ, ಮೇ 23 -- ಮಳೆಗಾಲ ಎಂದರೆ ಬಹುತೇಕ ಎಲ್ಲರಿಗೂ ಪ್ರೀತಿ, ಸೂರ್ಯನ ಶಾಖದಿಂದ ಬಳಲಿ ಬೆಂಡಾದ ಭೂಮಿ ತಾಯಿಗೆ ಮಾತ್ರವಲ್ಲ ಸಕಲ ಜೀವಚರಗಳಿಗೂ ವರುಣ ತಂಪನ್ನೆರೆಯುತ್ತಾನೆ. ಆದರೆ ಜೋರಾಗಿ ಸುರಿಯುವ ಮಳೆ ಒಂದಿಷ್ಟು ಅಪಾಯಗಳನ್ನೂ ಹೊತ್ತು ತರುತ್ತದೆ. ಅದಕ್ಕಾಗಿ ಮಳೆಗಾಲಕ್ಕೆ ಒಂದಿಷ್ಟು ಸಿದ್ಧತೆ ಖಂಡಿತ ಬೇಕು. ಮಳೆಗಾಲದಲ್ಲಿ ಸಮಸ್ಯೆಗಳು ಹೆಚ್ಚುವ ಕಾರಣ ಈ ಸಲಹೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸಿ.
ಮನೆಯ ಮೇಲ್ಛಾವಣಿ, ಸುತ್ತಲಿನ ಪರಿಸರ ಸ್ವಚ್ಛ ಮಾಡಿ: ಮಳೆಗಾಲ ಆರಂಭಕ್ಕೂ ಮುನ್ನ ಮನೆಯ ಮೇಲ್ಛಾವಣಿ, ಸುತ್ತಲಿನ ಪರಿಸರವನ್ನು ಸ್ವಚ್ಛ ಮಾಡಲು ಗಮನ ಕೊಡಿ. ಮನೆಯ ಟೆರೆಸ್ನಿಂದ ನೀರು ಸರಾಗವಾಗಿ ಹರಿದು ಹೋಗುತ್ತಿದೆಯೇ ಗಮನಿಸಿ. ಪೈಪ್ಗಳಲ್ಲಿ ಸಿಕ್ಕಿಕೊಂಡಿರುವ ಕಸ ತೆರವುಗೊಳಿಸಿ, ಪಾಚಿ ಕಟ್ಟಿರುವುದನ್ನು ಸ್ವಚ್ಛ ಮಾಡಿ. ನೀರು ಹರಿದು ಹೋಗಲು ಅವಕಾಶ ನೀಡಿ. ಮನೆಯ ಸುತ್ತಲಿನ ಗಟಾರ, ಚರಂಡಿಯಂತಹ ಪ್ರದೇಶಗಳಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಿ. ಎಲ್ಲಿಯೂ ನೀರು ನಿಲ್ಲ...
Click here to read full article from source
To read the full article or to get the complete feed from this publication, please
Contact Us.