ಭಾರತ, ಫೆಬ್ರವರಿ 11 -- ದಾಂಪತ್ಯ ಜೀವನದಲ್ಲಿನ ತೊಡಕುಗಳ ನಿವಾರಣೆಗಾಗಿ ಶಿವ-ಪಾರ್ವತಿಯರ ಆರಾಧನೆ ಶ್ರೇಷ್ಠ. ಇಂಥ ದೇವಾಲಯವು ತಮಿಳುನಾಡಿನ ಮೈಲಾಂಡದುರೈ ಜಿಲ್ಲೆಯ ತಿರುಮಂಗಲಕುಡಿ ಎಂಬ ಸ್ಥಳದಲ್ಲಿದೆ. ಈ ದೇವಾಲಯದ ಮುಖ್ಯ ದೈವವು ಪರಮೇಶ್ವರನಾದರೂ ಪಾರ್ವತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿರುವ ಶಿವನನ್ನು ಪ್ರಾಣನಾಥೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಶಿವನು ಲಿಂಗರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಶಿವನ ಪತ್ನಿಯಾದ ಪಾರ್ವತಿಯನ್ನು ಮಂಗಳನಾಯಕಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ಈ ದೇವಾಲಯವು ಬಲು ಪ್ರಾಚೀನ ಕಾಲದ್ದಾಗಿದೆ ಎಂದು ತಮಿಳು ಗ್ರಂಥಗಳು ಹೇಳುತ್ತವೆ. ಇಲ್ಲಿನ ಶಾಸನಗಳು ದೇವಾಲಯ ಬೆಳೆದು ಬಂದ ರೀತಿಯನ್ನು ತಿಳಿಸುತ್ತದೆ. ಈ ದೇವಾಲಯವನ್ನು ಚೋಳರು ನಿರ್ಮಿಸಿದರೂ ಅದರ ವಿಸ್ತರಣೆ ಮತ್ತು ಪುನರುಜ್ಜೀವನವನ್ನು ತಂಜಾವೂರಿನ ನಾಯಕರು ಮಾಡಿದರು. ಈ ದೇವಸ್ಥಾನವನ್ನು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಕಟ್ಟಲಾಗಿದೆ. ಇದರಿಂದ ಇದು ವಿಶೇಷವಾದ ಶಕ್ತಿಯನ್ನು ಹೊಂದಿದೆ.
ಈ ದೇವಾಲಯದ ಗೋಪುರದ ಕೆಳಭಾಗದಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.