ಭಾರತ, ಮೇ 18 -- ಕನ್ನಡ ಚಿತ್ರರಂಗದ ಪ್ರಮುಖರು ಶಿವರಾಜ್‌ ಕುಮಾರ್‌ ಅವರ ನಾಗವಾರದ ಮನೆಯಲ್ಲಿ ತುರ್ತು ಸಭೆ ಸೇರಿದ್ದು, ಕುತೂಹಲ ಕೆರಳಿಸಿದೆ. ಏನಿದು ತುರ್ತುಸಭೆ? ಶಿವಣ್ಣನ ಮನೆಯಲ್ಲಿ ಸಿನಿರಂಗದವರಿಗೆ ಪಾರ್ಟಿ ಆಯೋಜಿಸಲಾಗಿದೆಯೇ? ಯಾವುದಾದರೂ ಪ್ರಮುಖ ವಿಷಯದ ಕುರಿತು ಚರ್ಚಿಸಲಾಗಿದೆಯೇ? ಇದು ಕೇವಲ ಸೌರ್ಹಾದ ಭೇಟಿಯೇ ಇತ್ಯಾದಿ ಕುತೂಹಲ ಜನರಲ್ಲಿ ಮೂಡಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟರು ಮಾತ್ರವಲ್ಲದೆ ಸಿನಿಮಾ ಪ್ರದರ್ಶಕರು, ವಿತರಕರು ಕೂಡ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಕನ್ನಡ ನಟರಾದ ಗಣೇಶ್‌, ದುನಿಯಾ ವಿಜಯ್‌, ಧ್ರುವ ಸರ್ಜಾ ಮುಂತಾದವರು ಪಾಲ್ಗೊಂಡ ಈ ಸಭೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಚಿತ್ರಮಂದಿರಗಳ ಕೊರತೆ, ಟಿಕೆಟ್‌ ದರ, ಕನ್ನಡ ಸಿನಿಮಾ ನಿರ್ಮಾಣ ಕಡಿಮೆಯಾಗುತ್ತಿರುವುದು, ರಾಜ್ಯದ ಕನ್ನಡ ಸಿನಿಮಾ ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆಗಳು, ವಿತರಕರು, ಪ್ರದರ್ಶಕರು ಎದುರಿಸುವ ತೊಂದರೆಗಳ ಕುರಿತು ಶಿ...