Tamlinadu, ಏಪ್ರಿಲ್ 6 -- ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6 ರಂದು ತಮಿಳುನಾಡಿನ ಹೊಸ ಪಂಬನ್ ಸೇತುವೆಯನ್ನು ಉದ್ಘಾಟಿಸಲಿದ್ದು, ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಗೆ ಹೊಸ ರೂಪ ನೀಡಿರುವುದು ಗಮನ ಸೆಳೆಯುತ್ತಿದೆ. ಪಾಕ್ ಜಲಸಂಧಿಯಲ್ಲಿ ವ್ಯಾಪಿಸಿರುವ 2.07 ಕಿಲೋಮೀಟರ್ ಸೇತುವೆಯು ಸಂಪರ್ಕವನ್ನು ಸುಗಮಗೊಳಿಸುತ್ತದೆ. ರಾಮ ನವಮಿಯ ಸಂದರ್ಭದಲ್ಲಿ ರಾಮೇಶ್ವರಂ ಸಮೀಪದಲ್ಲಿ ಸೇತುವೆ ಅನಾವರಣಗೊಳ್ಳುತ್ತಿರುವುದು ವಿಶೇಷ.. ಇದು 1914 ರಲ್ಲಿ ನಿರ್ಮಿಸಲಾದ ಮೂಲ ಪಂಬನ್ ಸೇತುವೆಯನ್ನು ಬದಲಾಯಿಸುತ್ತದೆ, ಇದು ರಾಮೇಶ್ವರಂ ದ್ವೀಪವನ್ನು ಭಾರತದ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಶೆರ್ಜರ್ ರೋಲಿಂಗ್ ಲಿಫ್ಟ್ ಸ್ಪ್ಯಾನ್ ಹೊಂದಿರುವ ಕ್ಯಾಂಟಿಲಿವರ್ ರಚನೆಯಾಗಿದೆ.

ಕಾಲಾನಂತರದಲ್ಲಿ, ಹೆಚ್ಚುತ್ತಿರುವ ಸಾರಿಗೆ ಬೇಡಿಕೆಗಳಿಯಿಂದಾಗಿ ಹಳೆಯ ಸೇತುವೆ ಸಾಕಾಗುತ್ತಿರಲಿಲ್ಲ. ಕಠಿಣ ಸಮುದ್ರ ಪರಿಸರದಿಂದ ಸಾಕಷ್ಟ ಅಡಚಣೆಗಳಾಗಿ ಸೇತುವೆ ನಿರ್ಮಿಸುವ ಯೋಜನೆ ಶುರುವಾಯಿತು. ಆದಾಗ್ಯೂ, 2019 ರಲ್ಲಿ, ಈ ಪ್ರದೇಶದ ಸಾಂಸ್ಕ...