ಭಾರತ, ಮೇ 13 -- ಬೆಂಗಳೂರು: ಜೀವಕ್ಕೆ ಅಪಾಯ ತೊಂದೊಡ್ಡುವ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಚಟುವಟಿಕೆ ಈಗ ಗ್ರಾಮಗಳಿಗೂ ತಲುಪಿದ್ದು, ತಡೆಯುವ ಕೆಲಸವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸ್ಪಷ್ಟ ಸೂಚನೆ ನೀಡಿದೆ. ವ್ಹೀಲಿಂಗ್‌ ನಡೆಸುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೊಪ್ಪಳ ಜಿಲ್ಲೆ ಗಂಗಾವತಿಯ ಅರ್ಬಾಜ್‌ ಖಾನ್‌ ಅಲಿಯಾಸ್‌ ಅರ್ಬಾಜ್‌ (29) ಸಲ್ಲಿಸಿದ್ದ ಜಾಮೀನು ಕೋರಿಕೆಯನ್ನು ನ್ಯಾಯಪೀಠ ತಿರಸ್ಕರಿಸುತ್ತ ಈ ಸೂಚನೆ ನೀಡಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ವ್ಹೀಲಿಂಗ್ ದುಸ್ಸಾಹಸದ ಕೇಸ್‌ನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ರಾಜ್ಯ ಸರ್ಕಾರಕ್ಕೆ ಇದನ್ನು ತಡೆಯುವುದಕ್ಕೆ ಅಗತ್ಯ ಕ್ರಮಕೈಗೊಳ್ಳು ನಿರ್ದೇಶನ ನೀಡಿದರು. ಇದರಲ್ಲಿ ಗಮನಸೆಳೆದ 5 ಅಂಶಗಳಿವು.

1) ಅಪಾಯಕಾರಿ ವ್ಹೀಲಿಂಗ್‌ ಮುಂತಾದ ದುಸ್ಸಾಹಸ ಚಟುವಟಿಕೆಗಳನ...