ಭಾರತ, ಮೇ 7 -- ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತಾಣಗಳ ಮೇಲೆ ಭಾರತದ ಸೇನೆಯು ದಾಳಿ ನಡೆಸಿದೆ. ಈ ದಾಳಿಯಲ್ಲಿ ಉಗ್ರರ 9 ತಾಣಗಳನ್ನು ಭಾರತೀಯ ವಾಯು ಸೇನೆ ನಾಶ ಪಡಿಸಿದೆ. ಈ ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ ಐಎಎಫ್‌ ವಿಂಗ್‌ ಕಮಾಂಡರ್‌ ವ್ಯೂವಿಕಾ ಸಿಂಗ್. ಅವರು ಯಾರು, ಅವರ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.

ವಾಯು ಸೇನೆಯ ಪೈಲಟ್ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಗೆ ಸೇರಿದವರು. ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಿದ್ಧತೆ ನಡೆಸುವವರಿಗೆ ಈ ಎನ್‌ಸಿಸಿ ಮೊದಲ ಹಂತ ಎಂದೇ ಹೇಳಬಹುದು.

ಇಂಜಿನಿಯರಿಂಗ್ ಪೂರ್ಣಗೊಳಿಸಿದ ನಂತರ ಸಶಸ್ತ್ರ ಪಡೆಗೆ ಸೇರುತ್ತಾರೆ. ವಿಶೇಷವೆಂದರೆ ಇವರ ಕುಟುಂಬದಲ್ಲಿ ಸಶಸ್ತ್ರ ಪಡೆಗೆ ಸೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಬಳಿಕ ವ್ಯೋಮಿಕ ಸಿಂಗ್ 2019ರ ಡಿಸೆಂಬರ್ 18 ರಂದು ಭಾರತೀಯ ವಾಯು ಸೇನೆಯಲ್ಲಿ ಹೆ...