Bengaluru, ಮೇ 23 -- ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇ...