ಭಾರತ, ಮೇ 22 -- ಪರಿಸರ ನಮ್ಮ ಭೂಮಿಯು ಪ್ರಮುಖ ಭಾಗ, ಪರಿಸರ ಇಲ್ಲ ಎಂದರೆ ಈ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ನಗರೀಕರಣ, ಮನುಷ್ಯನ ದುರಾಸೆ, ತಂತ್ರಜ್ಞಾನಗಳ ಅತಿಯಾದ ಬೆಳವಣಿಗೆ ಹೀಗೆ ಹಲವು ಕಾರಣಗಳಿಣದ ದಿನೇ ದಿನೇ ಪರಿಸರ ನಾಶದ ಪ್ರಮಾಣ ಹೆಚ್ಚುತ್ತಿದೆ. ಮರ-ಗಿಡ, ನೆಲ, ಭೂಮಿ, ನೀರು, ನದಿ, ಆಕಾಶ ಹೀಗೆ ಹಲವು ಅಂಶಗಳೆಲ್ಲಾ ಸೇರಿ ಸುಂದರ ಪರಿಸರ ಎನ್ನಿಸಿಕೊಳ್ಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ಪ್ರತಿ ಅಂಶಕ್ಕೂ ಹಾನಿಯಾಗುತ್ತಿದೆ. ಕೈಗಾರಿಕೆ, ನಗರೀಕರಣ ಹೆಚ್ಚುತ್ತಿರುವುದು ಪರಿಸರಕ್ಕೆ ಇನ್ನಿಲ್ಲದ ಹಾನಿಯಾಗಲು ಮೂಲವಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್‌ ಬಳಕೆಯು ಸಸ್ಯಗಳು, ಪ್ರಾಣಿ ಸಂಕುಲಕ್ಕೆ ಮಾರಕವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಗರೀಕರಣ, ಕಟ್ಟಡಗಳು ಹೆಚ್ಚುತ್ತಿರುವ ಭರದ ನಡುವೆ ಮರ-ಗಿಡಗಳು ಕಣ್ಣಿಗೆ ಕಾಣುವುದೇ ಅಪರೂಪವಾಗಿದೆ. ಇದರೊಂದಿಗೆ ಹವಾಮಾನ ವೈಪರೀತ್ಯದ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಪ್ರಕೃತಿಯ ಮೂರು ಮೂಲ ಕಾಲಗಳಾದ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳು...