ಭಾರತ, ಮಾರ್ಚ್ 28 -- ಭಾರತದ ಇತಿಹಾಸದ ಕಡೆಗೆ ಗಮನಹರಿಸೋಣ. 120 ವರ್ಷಗಳ ಹಿಂದೆ 1905ರಲ್ಲಿ ವಿಶ್ವಾವಸು ಸಂವತ್ಸರ ಬಂದ ಸಂದರ್ಭ ಅದು. ಭಾರತದ ಮಟ್ಟಿಗೆ ಬಹಳ ಮಹತ್ವದ ವರ್ಷ. ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು. ಲಾರ್ಡ್ ಕರ್ಜನ್ ಭಾರತದ ವೈಸರಾಯ್ ಆಗಿದ್ದ. 1905ರ ಜುಲೈ 20ರಂದು ಬಂಗಾಳ ವಿಭಜನೆಯ ಘೋಷಣೆ ಮಾಡಿದ. ಕರ್ಜನ್ ಆಡಳಿತದ ಆಂತರಿಕ ನೀತಿಯ ಭಾಗವಾಗಿ ಬಂಗಾಳವನ್ನು 1905ರ ಅಕ್ಟೋಬರ್ 16 ರಂದು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲಾಯಿತು. ಜನಸಂಖ್ಯೆ ಹೆಚ್ಚಿದ್ದ ಕಾರಣ ಬಂಗಾಳದ ಆಡಳಿತ ಕಷ್ಟವೆನಿಸಿದೆ. ಹೀಗಾಗಿ, ಬಂಗಾಳ ವಿಭಜನೆ ಮಾಡಲಾಗುತ್ತಿದೆ ಎಂದು ಭಾರತೀಯರನ್ನು ಬ್ರಿಟಿಷರು ನಂಬಿಸಲು ಪ್ರಯತ್ನಿಸಿದ್ದರು. ಬ್ರಿಟಿಷರ ಮನದ ಇಂಗಿತ ಬೇರೆಯೇ ಇತ್ತು. ಭಾರತ ಸ್ವಾತಂತ್ರ್ಯ ಹೋರಾಟದ ಕೇಂದ್ರ ಸ್ಥಾನವಾಗಿ ಬಂಗಾಳ ಬೆಳೆಯುತ್ತಿರುವುದು ಅವರಿಗೆ ಸಹ್ಯವಾಗಿರಲಿಲ್ಲ. ಹೀಗಾಗಿ, ಮುಸ್ಲಿಂ ಮತ್ತು ಹಿಂದುಗಳ ನಡುವೆ ಒಡೆದು ಆಳುವ ನೀತಿಗೆ ಅನುಗುಣವಾಗಿ ಬಂಗಾಳ ವಿಭಜನೆ ನಡೆಯಿತು. ಆದಾಗ್ಯೂ, ಬಂಗಾಳ ವಿಭಜನೆಯ ಬ್ರಿಟಿ...