Bangalore, ಮೇ 18 -- ಬೆಂಗಳೂರು:ಕರ್ನಾಟಕದ ಸಾಕಾನೆಗಳಿಗೆ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.ಹಿಂದೆ ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ಉತ್ತರಾಖಂಡ್ ಸಹಿತ ಹಲವು ರಾಜ್ಯಗಳಿಗೆ ಕರ್ನಾಟಕದಲ್ಲಿ ಸೆರೆ ಸಿಕ್ಕ ಸಾಕಾನೆಗಳನ್ನು ನೀಡಲಾಗಿದೆ. ಈಗ ಆಂಧ್ರಪ್ರದೇಶದಿಂದಲೂ ಆನೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ನಿರಂತರ ಒಂದು ವರ್ಷದಿಂದ ನಡೆದಿದ್ದ ಚರ್ಚೆಗಳ ಬಳಿಕ ಈಗ ಆನೆಗಳನ್ನು ನೀಡಲು ಒಪ್ಪಿಗೆ ಕೊಡಲಾಗಿದೆ. ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ.ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ವಿದ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆರು ಆನೆಗಳನ್ನು ಹಸ್ತಾಂತರ ಮಾಡುವರು.
ಆಂಧ್ರಪ್ರದೇಶದ ಅರಣ್ಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಪವನ್ಕಲ್ಯಾಣ್ ಅವರು ಕರ್ನಾಟಕದಿಂದ 22 ಆನೆಗಳನ್ನು ಪಡೆಯುವ...
Click here to read full article from source
To read the full article or to get the complete feed from this publication, please
Contact Us.