ಬೆಂಗಳೂರು, ಮೇ 9 -- ಬೆಂಗಳೂರು: ಪ್ರಯಾಣಿಕರು ತಮ್ಮ ನಿಗದಿತ ವಿಮಾನ ನಿರ್ಗಮನ ಸಮಯಕ್ಕಿಂತ ಕನಿಷ್ಠ ಮೂರು ಗಂಟೆಗಳ ಮೊದಲು ಏರ್‌ಪೋರ್ಟ್‌ಗೆ ಬರಬೇಕು ಎಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ (ಮೇ.9) ಪ್ರಯಾಣಿಕರಿಗೆ ಮನವಿ ಮಾಡಿದೆ. ಅತ್ತ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಸನ್ನಿವೇಶ ಎದುರಾಗಿದೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಎಚ್ಚರಿಕೆಯ ದೃಷ್ಟಿಯಿಂದ ತೀವ್ರವಾದ ಭದ್ರತಾ ಮಾನದಂಡಗಳನ್ನು ಪೂರೈಸಲು ಹೆಚ್ಚುವರಿ ಸಮಯದ ಅಗತ್ಯವಿರುವ ದೃಷ್ಟಿಯಿಂದ ಈ ಸಲಹೆ ನೀಡಲಾಗಿದೆ.

(ಸುದ್ದಿ ಅಪ್ಡೇಟ್‌ ಮಾಡಲಾಗುತ್ತದೆ)

Published by HT Digital Content Services with permission from HT Kannada....