Vijayapur, ಮೇ 21 -- ವಿಜಯಪುರ: ಸೊಲ್ಲಾಪುರ ರಾಷ್ಟ್ರೀಯ ಹೆದ್ಧಾರಿಯ ವಿಜಯಪುರ ಸಮೀಪದ ಮನಗೂಳಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಮೂರು ವಾಹನಗಳ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ಧಾರೆ. ವಿಆರ್ಎಲ್ ಬಸ್, ಮಹೀಂದ್ರ ಸ್ಕಾರ್ಪಿಯೋ ಕಾರು ಹಾಗೂ ಕಂಟೈನರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.ಪ್ರಯಾಣಿಕರಿದ್ದ ವಿಆರ್ ಎಲ್ ಬಸ್ ಅಪಘಾತದಲ್ಲಿ ಸಿಲುಕಿದ್ದು, ಚಾಲಕ ಮೃತಪಟ್ಟರೆ, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸರು ಧಾವಿಸಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ . ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಕ್ಷಣಾ ತಂಡಗಳು, ಸ್ಥಳೀಯರ ಸಹಕಾರದಿಂದ ಮನಗೂಳಿ ಪೊಲೀಸರು ರಸ್ತೆ ಅಡಚಣೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
Published by ...
Click here to read full article from source
To read the full article or to get the complete feed from this publication, please
Contact Us.