Vijayapura, ಮೇ 1 -- ವಿಜಯಪುರ:ವಿಜಯಪುರದಲ್ಲಿ ಒಂದು ದಶಕದ ಅವಧಿಯಲ್ಲಿ ಜಾರಿಗೊಳಿಸಲಾಗಿರುವ ನೀರಾವರಿ ಯೋಜನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಗೋಚರಿಸುತ್ತಿವೆ. ಈಗಾಗಲೇ ನೀರಾವರಿ ಪ್ರದೇಶ ವ್ಯಾಪ್ತಿ ಏರಿಕೆಯಾಗುವ ಜತೆಗೆ ವಿಜಯಪುರ ಜಿಲ್ಲೆಯ ಹಲವು ಭಾಗದ ಅಂತರ್ಜಲ ಪ್ರಮಾಣವೂ ಗಣನೀಯವಾಗಿ ಏರಿಕೆ ಕಂಡು ಕೃಷಿಯಲ್ಲೂ ಸುಧಾರಣೆ ಕಂಡು ಬರುತ್ತಿದೆ. ಇನ್ನೂ ಹಲವು ಭಾಗದಲ್ಲಿ ನೀರಾವರಿ ಯೋಜನೆಗಳು ಬರದನಾಡು ಎಂದೇ ಖ್ಯಾತಿ ಪಡೆದಿದ್ದ ವಿಜಯಪುರ ಜಿಲ್ಲೆಯಲ್ಲಿ ಜಾರಿಯಲ್ಲಿದ್ದು, ಇನ್ನೂ ಕೆಲವು ವರ್ಷದಲ್ಲಿ ಈ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರಲಿದೆ. ಕೃಷಿ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆಗಳ ಪ್ರಮಾಣವೂ ಹಂತ ಹಂತವಾಗಿ ಹೆಚ್ಚಾಗಲಿದೆ. ರೈತರಿಗೂ ಇದರಿಂದ ನೇರ ಸಹಾಯವಾಗುತ್ತಿದೆ.
ವಿಜಯಪುರ ಒಂದು ಕಾಲಕ್ಕೆ ಕೃಷ್ಣಾ, ಮಲಪ್ರಭ, ಘಟಪ್ರಭಾ,ಭೀಮಾ ಹಾಗೂ ಢೋಣಿ ನದಿಯಿಂದಾಗಿ ಪಂಚನದಿಗಳ ಬೀಡು ಎನ್ನುವ ಹೆಸರು ಪಡೆದಿತ್ತು. ಆದರೆ ನೀರಾವರಿ ಯೋಜನೆ ಜಾರಿ ವಿಚಾರದಲ್ಲಿ ಹಿಂದೆ ಬಿದ್ದಿತ್ತು. ಇದರಿಂದ ಕೃಷಿ ಅಷ್ಟಾಗಿ ಇರಲಿಲ್ಲ. ಈಗ ಇಲ್ಲಿನ ...
Click here to read full article from source
To read the full article or to get the complete feed from this publication, please
Contact Us.