ಭಾರತ, ಮೇ 12 -- ಬೆಂಗಳೂರು ನಗರದ ಕುರಿತು ಹೆಚ್ಚು ಚರ್ಚೆಯಾಗುವ ವಿಷಯವೆಂದರೆ, ಇಲ್ಲಿನ ಟ್ರಾಫಿಕ್. ಇತ್ತೀಚೆಗೆ, ಜೆರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಅವರು ಬೆಂಗಳೂರಿನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಗರದ ಟ್ರಾಫಿಕ್ ಸಮಸ್ಯೆ ಕುರಿತು ಮುಕ್ತವಾಗಿ ಸಂವಾದ ನಡೆಸಿದರು. ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಮತ್ತು ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರಲ್ಲಿ ನಗರದ ರಸ್ತೆಗಳಲ್ಲಿ ವಿಐಪಿ ಸಂಸ್ಕೃತಿಯ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಇಬ್ಬರು ಅಧಿಕಾರಿಗಳು ಸೂಕ್ತ ಉತ್ತರ ನೀಡಿದ್ದಾರೆ.
'ನಗರದ ಸಂಚಾರ ನಿಯಮಗಳಿಗಿಂತ ವಿಐಪಿಗಳು ಹೆಚ್ಚೇ' ಎಂದು ಕಾಮತ್ ಅವರಲ್ಲಿ ಪ್ರಶ್ನಿಸಿದ್ದಾರೆ. ಸಂವಾದದ ವೇಳೆ ನಿಖಿಲ್ ಕಾಮತ್ ಗಂಭೀರ ಪ್ರಶ್ನೆಯನ್ನು ತಮಾಷೆಯ ಧಾಟಿಯಲ್ಲಿ ಕೇಳಿದರು. "ರಾಜಕಾರಣಿಗಳು ಸಿಗ್ನಲ್ ಬ್ರೇಕ್ ಮಾಡಿದರೆ ಪೊಲೀಸರು ಅವರಿಗೆ ದಂಡ ವಿಧಿಸುತ್ತಾರೆಯೇ?" ಎಂದು ಹಿರಿಯ ಐಪಿಎಸ್ ಅಧಿಕಾರಿ ದಯಾನಂದ ಅವರಲ್ಲಿ ಕಾಮತ್ ಕೇಳಿದರು. ಇದಕ್ಕೆ ಉತ್ತರಿಸಿದ ದಯಾನಂದ, "ಇ...
Click here to read full article from source
To read the full article or to get the complete feed from this publication, please
Contact Us.