Tumakuru, ಮೇ 20 -- ಸಚಿವ ಕೆಎನ್ ರಾಜಣ್ಣ ಅವರ ರಾಜಕೀಯ ನಿವೃತ್ತಿ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಕೆಎನ್ ರಾಜಣ್ಣ ಅವರೇ ಸ್ವತಃ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ಇಂದು (ಮೇ 20) ಕೂಡ ಹುಣಸೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತ, ನನಗೆ 75 ವರ್ಷ ವಯಸ್ಸಾಯಿತು. ಯುವಕರಿಗೆ ಅವಕಾಶ ಸಿಗಬೇಕು. ರಾಜಕೀಯದಿಂದ ನಿವೃತ್ತನಾಗುವೆ ಎಂದು ಹೇಳಿರುವುದು ಗಮನಸೆಳೆದಿದೆ. ಆದಾಗ್ಯೂ, ವಾರದ ಹಿಂದೆ ತಮ್ಮ 75ನೇ ಹುಟ್ಟುಹಬ್ಬದ ನಿಮಿತ್ತ ಮನೆಯಲ್ಲೇ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಕೆಎನ್‌ ರಾಜಣ್ಣ ಆಡಿದ ಮಾತು ಬಹಳ ಆತ್ಮವಿಶ್ವಾಸದಿಂದ ಕೂಡಿತ್ತು. ಅವರ ಮಾತು, ನಡೆಗಳು ರಾಜಕೀಯ ಲೆಕ್ಕಾಚಾರದಲ್ಲೇ ಇರುವ ಕಾರಣ ರಾಜಕೀಯದಲ್ಲಿ ಇದು ಹೀಗೆಯೇ ಎಂದು ಗೆರೆ ಕೊಯ್ದಂತೆ ಹೇಳಲಾಗದು. ಆದಾಗ್ಯೂ, ಸನ್ನಿವೇಶವನ್ನು ಇಟ್ಟುಕೊಂಡು ಅವಲೋಕನ, ವಿಶ್ಲೇಷಣೆ ಮಾಡುವುದಕ್ಕೆ ಅಡ್ಡಿ ಇಲ್ಲ.

ನೇರ ಮಾತು, ನಿಷ್ಠೂರ ವಾದಿ ರಾಜಕಾರಣಿ ಎನಿಸಿಕೊಂಡವರು ಕೆ.ಎನ್. ರಾಜಣ್ಣ, ಮಧುಗಿರಿ ಕ್ಷೇತ್ರದಿಂದ ಗೆದ್ದು ಸಹಕಾರಿ ಸಚಿವ ಸ್ಥಾನ ಅಲಂಕರಿಸಿರ...