ಭಾರತ, ಮೇ 10 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆಯಲ್ಲಿ ಭಾವ ಮನೆ ಬಿಟ್ಟು ಹೋಗಿ, ಸ್ವಂತ ಮನೆ ಮಾಡುತ್ತೇನೆ ಎಂದು ಹೇಳಿರುವುದರ ಬಗ್ಗೆಯೇ ಚಿಂತಿಸುತ್ತಿರುತ್ತಾನೆ ಸುಬ್ಬು. ಆಗ ಕೋಣೆಗೆ ಬರುವ ಶ್ರಾವಣಿ ಸುಬ್ಬು ಬಳಿ 'ಯಾಕೆ ಸುಬ್ಬು, ಇಷ್ಟೊಂದು ಬೇಸರದಲ್ಲಿದ್ದೀಯಾ' ಎಂದು ಕೇಳುತ್ತಾಳೆ. ಆಗ ಸುಬ್ಬು 'ಮೇಡಂ, ನೀವು ನಮ್ಮ ಭಾವನಿಗೆ ಏನಾದ್ರೂ ಹೇಳಿದ್ರಾ' ಎಂದು ನೇರವಾಗಿ ಕೇಳುತ್ತಾನೆ. ಅದಕ್ಕೆ ಶ್ರಾವಣಿ 'ಸುಬ್ಬು ಈ ಮನೆಯಲ್ಲಿ ಎಲ್ಲರೂ ನನಗೆ ಏನಾದ್ರೂ ಹೇಳುತ್ತಾರೆ. ಆದರೆ ನಾನು ಮಾತ್ರ ಯಾರಿಗೂ ಏನೂ ಹೇಳುವುದಿಲ್ಲ. ಆದರೂ ನೀನು ನನ್ನ ಮೇಲೆ ಅನುಮಾನ ಪಡ್ತೀಯಾ. ಅದೂ ಅಲ್ಲದೇ ಸುಂದರ ಹಾಗೂ ಕಾಂತಮ್ಮ ಅವರು ನನಗೆ ಪದೇ ಪದೇ ಅನುಮಾನ ಮಾಡುತ್ತಾರೆ ಹೊರತು ನಾನು ಅವರಿಗೆ ತಿರುಗಿಸಿ ಒಂದೂ ಮಾತನಾಡಿಲ್ಲ' ಎಂದು ಹೇಳುತ್ತಾಳೆ. ಆಗ ಸುಬ್ಬು 'ಹಾಗಲ್ಲ ಮೇಡಂ ನನಗೆ ಅವರು ಈ ಮನೆಯಿಂದ ಆಚೆ ಹೋಗೋದು ಇಷ್ಟ. ನನಗೆ ಮನೆಯಲ್ಲಿ ಎಲ್ಲರೂ ಇರಬೇಕು. ನನಗೆ ಎಷ್ಟೇ ಚಿಂತೆ, ನೋವು ಇದ್ರು ಮನೆಯವರ ಮುಖ ನೋಡಿ ಎಲ್ಲವನ್ನೂ ಮರೆಯುತ್ತೇ...