Bengaluru, ಏಪ್ರಿಲ್ 8 -- Lakshmi Baramma Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಮುಕ್ತಾಯಗೊಳ್ಳಲಿದೆ. ಸೋಮವಾರ ಪ್ರಸಾರವಾದ 601ನೇ ಸಂಚಿಕೆಯ ಕಥೆ ಇಲ್ಲಿದೆ. ತಲೆಗೆ ಪೆಟ್ಟು ಬಿದ್ದಿದ್ದ ಕೀರ್ತಿಯನ್ನು ಲಕ್ಷ್ಮೀ ಕಾಪಾಡುತ್ತಾಳೆ. ದೇವಸ್ಥಾನದಲ್ಲಿ ಕೀರ್ತಿಗೆ ಹಳೆಯ ನೆನಪುಗಳು ಬರುತ್ತದೆ. ತನ್ನ ಸ್ವಾರ್ಥಕ್ಕಾಗಿ ನನ್ನ ಜೀವನ ಹಾಳು ಮಾಡಿದ ಕಾವೇರಿಯನ್ನು ಬಿಡುವುದಿಲ್ಲ, ಅವಳನ್ನು ಕೊಲ್ಲುತ್ತೇನೆ ಎಂದು ಕೀರ್ತಿ ತ್ರಿಶೂಲ ಹಿಡಿದು ಹೊರಡುತ್ತಾಳೆ. ಆದರೆ ಲಕ್ಷ್ಮೀ ಅವಳನ್ನು ತಡೆಯುತ್ತಾಳೆ.

ಈ ನಡುವೆ ಕಾವೇರಿಗೆ ಹೊಸ ಸಂಕಟ ಶುರುವಾಗಿದೆ. ಎಲ್ಲವೂ ನಾನು ಅಂದುಕೊಂಡತೇ ಆಗುತ್ತಿದೆ. ವೈಷ್ಣವ್‌ ಜೀವನದಿಂದ ಲಕ್ಷ್ಮೀಯನ್ನು ಕಳಿಸಿ ತಾನು ಆರಿಸಿದ ಹೊಸ ಹುಡುಗಿಯನ್ನು ಮಗನಿಗೆ ಮದುವೆ ಮಾಡಿದರೆ ಎಲ್ಲವೂ ಸರಿ ಆಗಲಿದೆ ಎಂದು ಕಾವೇರಿ ಖುಷಿಯಾಗಿದ್ದಾಳೆ. ಆದರೆ ಅವಳ ಮೊಬೈಲ್‌ಗೆ ಬರುವ ಅನಾಮಧೆಯ ಸಂದೇಶವೊಂದು ಕಾವೇರಿ ನೆಮ್ಮದಿ ಹಾಳು ಮಾಡುತ್ತದೆ. ವಿಧಿ ಹಾಗೂ ವಿಕ್ಕಿ ಮದುವೆ ಆದ ನಂ...