ಭಾರತ, ಫೆಬ್ರವರಿ 26 -- ರಕ್ತಹೀನತೆಯಿಂದ ಬಳಲುತ್ತಿದ್ದರೆ ನಿರ್ಜಲೀಕರಣ ಮತ್ತು ಆಯಾಸವು ಉಸಿರಾಟದ ತೊಂದರೆಯಿಂದ ಹಿಡಿದು ಕಾಲುಗಳು ಮತ್ತು ಕೀಲುಗಳ ಊತದವರೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತಹೀನತೆಗೆ ಇತರ ಕಾರಣಗಳಿದ್ದರೂ, ಈ ಸಮಸ್ಯೆಗೆ ಪರಿಹಾರವನ್ನು ಆಹಾರದಿಂದ ಪಡೆಯಬಹುದು. ರಾಗಿ ಹಾಗೂ ಕಡಲೆಕಾಯಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. ಆರೋಗ್ಯಕ್ಕೂ ಹಿತ, ಬಾಯಿಗೂ ರುಚಿ ನೀಡುವ ರಾಗಿ-ಕಡಲೆಕಾಯಿ ಲಾಡು ತಯಾರಿಸುವುದು ತುಂಬಾ ಸುಲಭ. ರುಚಿಕರ ರಾಗಿ-ಕಡಲೆಕಾಯಿ ಲಾಡು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ತುಪ್ಪ - ಎರಡು ಚಮಚ, ರಾಗಿ ಪುಡಿ - ಕಾಲು ಕಪ್, ಕಡಲೆಕಾಯಿ- ಅರ್ಧ ಕಪ್, ತುರಿದ ಬೆಲ್ಲ - 1/3 ಕಪ್, ನೀರು - ¼ ಕಪ್, ಏಲಕ್ಕಿ ಪುಡಿ - ಒಂದು ಚಮಚ, ಒಂದು ಚಿಟಿಕೆ ಉಪ್ಪು.
ಮಾಡುವ ವಿಧಾನ: ರಾಗಿ ಲಾಡು ಮಾಡಲು ಮೊದಲು ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಕಡಲೆಕಾಯಿಯನ್ನು ಹುರಿಯಿರಿ. ಕಡಲೆಕಾಯಿ ಸಂಪೂರ್ಣವಾಗಿ ತಣ್ಣಗಾದ ನಂತರ...
Click here to read full article from source
To read the full article or to get the complete feed from this publication, please
Contact Us.