Bengaluru, ಜೂನ್ 10 -- ಶನಿವತ್ ರಾಹು ಕುಜವತ್ ಕೇತು ಎಂಬ ಮಾತು ಜೋತಿಷ್ಯ ಶಾಸ್ತ್ರದಲ್ಲಿದೆ. ಅಂದರೆ ರಾಹುವು ಶನಿಗ್ರಹದಂತೆ ಫಲಗಳನ್ನು ನೀಡುತ್ತದೆ. ಇದೇ ರೀತಿ ಕೇತುವು ಕುಜ ಅಥವಾ ಮಂಗಳನ ರೀತಿ ಫಲಗಳನ್ನು ನೀಡುತ್ತದೆ. ಈ ಕಾರಣದಿಂದಾಗಿ ರಾಹುವು ಕುಂಭರಾಶಿಯಲ್ಲಿ ಸಂಪೂರ್ಣ ಶಕ್ತಿಯುತನಾಗುತ್ತಾನೆ. ಆದ್ದರಿಂದ ರಾಹುವು ಕೇವಲ ಅಶುಭ ಫಲಗಳನ್ನು ನೀಡದೆ ಕೆಲವೊಂದು ವಿಚಾರದಲ್ಲಿ ಶುಭ ಫಲಗಳನ್ನು ನೀಡುತ್ತಾನೆ. ಇದರ ಬಗ್ಗೆ ಪುರಾತನ ಗ್ರಂಥಗಳಿಂದ ಮಾತ್ರ ತಿಳಿಯಲು ಸಾಧ್ಯ. ಕುಜನು ಸಿಂಹ ರಾಶಿಯನ್ನು 2025 ರ ಜೂನ್ 6 ರಂದು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಜುಲೈ ತಿಂಗಳ 28 ರವರೆಗು ಸಂಚರಿಸುತ್ತಾನೆ. ಕುಜನಿಗೆ ಸಿಂಹ ರಾಶಿಯು ಮಿತ್ರಕ್ಷೇತ್ರವಾಗುತ್ತದೆ. ಆದ್ದರಿಂದ ರಾಹು ಮತ್ತು ಕುಜರ ದೃಷ್ಠಿ ಇದ್ದರೂ ಶುಭ ಮತ್ತು ಅಶುಭಫಲಗಳು ಸಮನಾಗಿರುತ್ತವೆ.

ತಂದೆ ತಾಯಿಗಳಿಗೆ ಸುಖ ಸಂತೋಷದ ಜೀವನವಿರುತ್ತದೆ. ಕೆಲಸ ಕಾರ್ಯಗಳಿಗೆ ದೂರದ ಸಂಬಂಧಿಕರು ಅಥವಾ ಪರಿಚಯಸ್ಥರ ಸಹಾಯ ದೊರೆಯುತ್ತದೆ. ಸೋದರ ಮತ್ತು ಸೋದರಿಯರ ಜೊತೆ ಇದ್ದ ಮನಸ್ತಾಪವು ದ...