ರಾಮಾಯಣ ಯುದ್ಧಕಾಂಡ: ಲಂಕೆಯಲ್ಲಿ ನಡೆಯಿತು ಘನಘೋರ ರಾಮ ರಾವಣ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತ -ಶ್ರೀರಾಮನವಮಿ ವಿಶೇಷ
ಭಾರತ, ಏಪ್ರಿಲ್ 16 -- ಯುದ್ಧಕಾಂಡದ ಕಥೆ: ಸೀತೆಯನ್ನು ಹುಡುಕಲು ಆಂಜನೇಯ ಮೊದಲಾದ ವಾನರ ವೀರರು ದಕ್ಷಿಣ ದಿಕ್ಕಿಗೆ ಹೋಗಿರುತ್ತಾರೆ. ಅವರು ಇನ್ನೂ ಬರಲಿಲ್ಲ ಎಂದು ಶ್ರೀರಾಮ-ಲಕ್ಷ್ಮಣರು ಚಡಪಡಿಸುತ್ತಿರುತ್ತಾರೆ. ಹನುಮಂತ ಅದೇ ವೇಳೆಗೆ ಕಿಷ್ಕಿಂಧೆಗೆ ಬರುತ್ತಾನೆ. ಅವನನ್ನು ಕಂಡು ಎಲ್ಲರೂ ಸಂತೋಷಗೊಳ್ಳುತ್ತಾರೆ. ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ ನಂತರ ಅಶೋಕ ವನದಲ್ಲಿ ಸೀತಾದೇವಿಯನ್ನು ನೋಡಿದ್ದು, ಮಾತನಾಡಿಸಿದ್ದು ಮತ್ತು ರಾಮನು ರಾವಣನ ಜೊತೆ ಯುದ್ದ ಮಾಡಿ ತನ್ನನ್ನು ಅಯೋಧ್ಯೆಗೆ ಕರೆದೊಯ್ಯಬೇಕೆಂಬ ಸೀತಾಮಾತೆಯ ಮನದ ಆಶಯವನ್ನು ಹನುಮಂತ ತಿಳಿಸುತ್ತಾನೆ.
ಸೀತಾದೇವಿಯು ನೀಡಿದ ಚೂಡಾಮಣಿಯನ್ನು ರಾಮ-ಲಕ್ಷ್ಮಣರಿಗೆ ತೋರಿಸುತ್ತಾನೆ. ಇದರಿಂದ ಸಂತಸಗೊಂಡ ರಾಮ-ಲಕ್ಷ್ಮಣರು ಲಂಕೆಯ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಾರೆ. ಶ್ರೀರಾಮನು ಸುಗ್ರೀವನ ಸಹಾಯವನ್ನು ಕೇಳಿದಾಗ ಇಡೀ ರಾಜ್ಯದ ಜನರೇ ರಾಮನ ಹಿಂದೆ ಸಹಾಯ ನೀಡಲು ಸಿದ್ದರಾಗಿ ನಿಲ್ಲುತ್ತಾರೆ. ಹನುಮಂತನಿಂದ ಲಂಕೆಗೆ ಇದ್ದ ರಕ್ಷಣೆಯ ತಂತ್ರಗಳ ಬಗ್ಗೆ ರಾಮನು ತಿಳಿದುಕೊ...
Click here to read full article from source
To read the full article or to get the complete feed from this publication, please
Contact Us.