Bengaluru, ಮೇ 1 -- ರಾಮಾನುಜಾಚಾರ್ಯರ ಜಯಂತಿಯನ್ನು 2025ರಲ್ಲಿ ಮೇ 2 ರಂದು ಆಚರಿಸುತ್ತೇವೆ. ರಾಮಾನುಜಾಚಾರ್ಯರು 1017 - 1137ರಲ್ಲಿ ಇದ್ದರೆಂದು ತಿಳಿದುಬರುತ್ತದೆ. ಆದರೆ ಇದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಇವರು ಹಿಂದೂಧರ್ಮದ ಅನುಯಾಯಿಗಳು ಮತ್ತು ತತ್ವಜ್ಞಾನಿಗಳಾಗಿದ್ದರು. ಸಮಾಜ ಸುಧಾರಣೆಯಲ್ಲಿ ಇವರ ಕೊಡುಗೆ ಅಪಾರ. ಶ್ರೀ ವೈಷ್ಣವ ಸಂಪ್ರದಾಯದ ಪ್ರತಿಪಾದಕರಾಗಿದ್ದರು. ಭಕ್ತಿ ಚಳುವಳಿಯಲ್ಲಿ ಇವರ ಪಾತ್ರ ಅತಿ ಮುಖ್ಯವಾಗುತ್ತದೆ. ಚೋಳರು ರಾಜರಾಗಿದ್ದ ಕಾಲದಲ್ಲಿ ತಮಿಳುನಾಡಿನ ಶ್ರೀಪೆರಂಬದೂರ್ ಎಂಬ ಹಳ್ಳಿಯಲ್ಲಿ ಜನಿಸುತ್ತಾರೆ. ಇವರದ್ದು ತಮಿಳು ಬ್ರಾಹ್ಮಣ ಸಂಪ್ರದಾಯವಾಗಿತ್ತು. ಇವರ ತಂದೆ ಅಸುರಿ ಸೋಮಯಾಜಿಗಳು ಮತ್ತು ತಾಯಿ ಶ್ರೀಮತಿ ಕಂಠಿಮತಿ. ಇವರ ಜೀವಿತಾವದಿ 120 ವರ್ಷಗಳು ಎಂದು ಧರ್ಮಗ್ರಂಥಗಳಿಂದ ತಿಳಿದುಬರುತ್ತದೆ. ಯಾದವ ಪ್ರಕಾಶರು ಇವರ ಗುರುಗಳಾಗಿದ್ದರು. ಆದರೆ ಯಾದವ ಪ್ರಕಾಶರಿಗೆ ಅದ್ವೈತ ವೇದಾಂತದ ಜ್ಞಾನ ಇರುತ್ತದೆ. ಈ ಕಾರಣದಿಂದ ಇವರೊಂದಿಗೆ ಶ್ರೀ ರಾಮಾನುಜಾಚಾರ್ಯರಿಗೆ ತಮ್ಮ ಗುರುಗಳ ಜೊತೆಯಲ್ಲ...