Bengaluru, ಮೇ 20 -- ಬೆಂಗಳೂರು: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಈ ತಿಂಗಳಿಗೆ ಎರಡು ವರ್ಷಗಳನ್ನು ಪೂರ್ಣಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಎರಡು ವರ್ಷಗಳಲ್ಲಿ ಮುಖ್ಯವಾಗಿ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟಿದ್ದು ಸಾಕಷ್ಟು ಹೊಗಳಿಕೆ ತೆಗಳಿಕೆ ಎರಡನ್ನೂ ಕಂಡಿದೆ. ಐದು ಗ್ಯಾರಂಟಿಗಳೇ ಸರ್ಕಾರದ ಜೀವಾಳವಾಗಿದ್ದು, ಎರಡು ವರ್ಷಗಳಲ್ಲಿ ಸುಮಾರು 80,000 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

2025ರ ಮಾರ್ಚ್‌ನಲ್ಲಿ 16ನೇ ಬಜೆಟ್‌ ಮಂಡಿಸುವ ಮೂಲಕ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ದಾಖಲೆಯ ಅವಧಿಯನ್ನೂ ಮುರಿದಿದ್ದಾರೆ. ಅರಸು ಅವರು ೭ ವರ್ಷ ೭ ತಿಂಗಳು ಆಡಳಿತ ನಡೆಸಿದಾರೆ. ಸಿದ್ದರಾಮಯ್ಯ ಅವರೂ ಮೊದಲ ೫ ವರ್ಷಗಳ ಅವಧಿಯನ್ನು ನಿರಾತಂಕವಾಗಿ ಪೂರ್ಣಗೊಳಿಸಿದ್ದರು. ಆದರೆ ಎರಡನೇ ಅವಧಿಯ ಹಾದಿ ಸುಗಮವಾಗಿಲ್ಲ. ಈ ಅವಧಿಯಲ್ಲಿ ಹೈಕಮಾಂಡ್‌ ಹೆಜ್ಜೆ ಹೆಜ್ಜೆಗೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದೆ. ಎರಡು ವರ್ಷಗಳಲ್ಲ...