ಭಾರತ, ಏಪ್ರಿಲ್ 27 -- ಹಳೆಯ ಸಿನಿಮಾಗಳಲ್ಲಿ ಬಾಲ ನಟರಾಗಿ ಎಂಟ್ರಿ ಕೊಟ್ಟು ನಂತರ ಒಂದಿಷ್ಟು ವರ್ಷಗಳ ಕಾಲ ತೆರೆಮರೆಗೆ ಸರಿದು ಮತ್ತೆ ಹಿರಿತೆರೆ, ಕಿರುತೆರೆಯಲ್ಲಿ ಮಿಂಚುತ್ತಿರುವ ಸಾಕಷ್ಟು ಕಲಾವಿದವರು ನಮ್ಮ ನಡುವೆ ಇದ್ದಾರೆ. ಅವರಲ್ಲಿ ಹಲವರನ್ನು ನಾವು ಗುರುತಿಸುವುದು ಕಷ್ಟವಾಗುತ್ತದೆ. ಅಷ್ಟು ಬದಲಾಗಿರುತ್ತಾರೆ. ಪುನೀತ್ ರಾಜ್‌ಕುಮಾರ್‌, ಮಾಸ್ಟರ್ ಆನಂದ್ ಸೇರಿದಂತೆ ಹಲವರು ಬಾಲನಟರಾಗಿ ಖ್ಯಾತಿ ಪಡೆದು ನಂತರ ಮತ್ತೆ ತೆರೆ ಮೇಲೆ ನಟನೆಯ ಛಾಪು ತೋರಿದವರು. ಈ ನಟ ಕೂಡ ಬಾಲನಟನಾಗಿ ಸಿನಿಮಾಗಳಲ್ಲಿ ಮಿಂಚಿದವರು. ಸದ್ಯ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

ರವಿಚಂದ್ರನ್, ಫರಿನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಕಪ್ಪೆರಾಯ ಎನ್ನುವ ಹುಡುಗ ನಿಮಗೆ ನೆನಪಿರಬಹುದು. ಅವನ ಜೊತೆಗೆ ಇನ್ನೂ ಇಬ್ಬರು ಹುಡುಗರು ಇರುತ್ತಾರೆ. ನಾಯಕಿ ಪರಿಮಳ ಹಿಂದೆ ಹಿಂದೆ ಸುತ್ತಾತ್ತಾ 'ಅಕ್ಕ ನಿನ್ ಗಂಡ ಹೆಂಗಿರಬೇಕು' ಎನ್ನುತ್ತಾ ಹಾಡು ಹೇಳಿ ಕುಣಿದಿರುವುದು ನಿಮಗೆ ನೆನಪಿರಬಹುದು. ಹೌದು ಆ ಮೂವರಲ್ಲಿ ಬಾಲಕರಲ...