ಭಾರತ, ಮಾರ್ಚ್ 11 -- ಬೆಂಗಳೂರು: ತುಮಕೂರು ಸಮೀಪ 12 ಎಕರೆ ಭೂಮಿ ಮಂಜೂರು ಮಾಡಿದ್ದನ್ನು ಪ್ರಶ್ನಿಸಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್‌ ಸೋಮವಾರ, ರನ್ಯಾ ರಾವ್‌ ಕೈಗಾರಿಕೋದ್ಯಮಿಯೇ ಅಥವಾ ಸ್ಮಗ್ಲರಾ ಎಂಬುದನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು. ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ರನ್ಯಾ ರಾವ್‌ ನ್ಯಾಯಾಂಗ ಬಂಧನದಲ್ಲಿದ್ದು, ಈ ವಿಚಾರ ವಿಧಾನ ಮಂಡಲ ಅಧಿವೇಶನದಲ್ಲೂ ಸದ್ದು ಮಾಡಿದೆ.

ವಿಧಾನಮಂಡಲದಲ್ಲಿ ರನ್ಯಾ ರಾವ್ ಅವರ ಪಾಲುದಾರಿಕೆಯ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ತಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಜಮೀನು ಮಂಜೂರು ಮಾಡಿದ ವಿಚಾರ ಚರ್ಚೆಗೆ ಒಳಗಾಯಿತು. ಆಗ, ಕಾಂಗ್ರೆಸ್ ಶಾಸಕ ರಿಜ್ವಾನ್‌ ಅರ್ಷಾದ್ , ಚಿನ್ನ ಕಳ್ಳಸಾಗಣೆ ಸಂಬಂಧಿಸಿ ತನಿಖೆಗೆ ಡಿಆರ್‌ಐ ಹಾಗೂ ಸಿಬಿಐಗಳಿಗೆ ಸಂಪೂರ್ಣ ಅಧಿಕಾರ ಇದೆ. ಹೀಗಿರುವಾಗ. ರನ್ಯಾ ರಾವ್ ಅವರಿಗೆ ಸಂಬಂಧಿಸಿದ ಕಂಪನಿಗೆ ಹಿಂದಿನ ಬಿಜೆಪಿ ಸರ್ಕಾರ ತುಮಕೂರು ಸಮೀಪ 12 ಎಕರೆ ಜಮೀನನ್ನು ಹಂಚಿಕೆ ಮಾಡಿದ್ದು ಯಾಕೆ, ಆಕೆ ಕೈಗಾರಿ...