ಭಾರತ, ಮೇ 9 -- 'ಆಪರೇಷನ್‌ ಸಿಂದೂರ' ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ದೇಶದಾದ್ಯಂತ ನಾಗರಿಕರನ್ನು ಸಿದ್ಧಪಡಿಸಲು ದೇಶಾದ್ಯಂತ ನಾಗರಿಕ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಉತ್ತರ ಭಾರತದ ಕೆಲವು ಗಡಿ ರಾಜ್ಯಗಳಲ್ಲಿ ಭದ್ರತೆಯಯ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಸಂಪೂರ್ಣ ಬ್ಲ್ಯಾಕೌಟ್ ಅಥವಾ ಯುದ್ಧದ ಸಂದರ್ಭ ಎದುರಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಸಂಗ್ರಹಿಸಲು ಕೆಲವರು ಮುಂದಾಗುತ್ತಾರೆ. ಇಂಥಾ ತುರ್ತು ಸಂದರ್ಭ ಎದುರಾಗುವ ಸಾಧ್ಯತೆ ಇಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಹೇಗೆ ಸಿದ್ಧರಾಗುವುದು ಎಂಬುದನ್ನು ತಿಳಿಯೋಣ.

ಆಹಾರ ಮತ್ತು ನೀರು: ಒಣ ಹಣ್ಣುಗಳು, ನಟ್ಸ್ ಮತ್ತು ಇತರ ದೀರ್ಘಕಾಲ ತಿನ್ನಬಹುದಾದ ಹಾಳಾಗದಂತಹ ಆಹಾರಗಳನ್ನು ಇಟ್ಟುಕೊಳ್ಳಿ. ಒಣಗಿಸಿದ ಆಹಾರ ಅಥವಾ ಉಪ್ಪಿನಕಾಯಿ ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯ. ಬಾಟಲಿ ನೀರು ಸಂಗ್ರಹಿಸಿಟ್ಟುಕೊಳ್ಳಿ. ನೀರು ಶುದ್ಧೀಕರಣ ಮಾತ್ರೆಗಳು ಅಥವಾ ಫಿಲ್ಟರ್ ಬಳಕೆ ಒಳ್...