Bengaluru, ಮಾರ್ಚ್ 28 -- ಬೆಂಗಳೂರು: ಕೆಎಂಎಫ್‌ ತನ್ನ ನಂದಿನಿ ಹಾಲು ದರ 4 ರೂಪಾಯಿ ಏರಿಕೆ ಮಾಡುವುದಾಗಿ ಘೋಷಿಸಿದ ಬಳಿಕ ವ್ಯಾಪಕ ಟೀಕೆಗಳು ಸಾರ್ವಜನಿಕವಾಗಿ ಹಾಗೂ ರಾಜಕೀಯ ವಲಯದಲ್ಲೂ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ, ಯುಗಾದಿ ಹಬ್ಬಕ್ಕೆ ಕರ್ನಾಟಕ ಸರ್ಕಾರ ಬೆಲೆ ಏರಿಕೆ, ತೆರಿಗೆ ದರ ಏರಿಕೆಗಳ ಕೊಡುಗೆಯನ್ನು ಜನರಿಗೆ ನೀಡುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಬಗ್ಗೆ ಶುಕ್ರವಾರ (ಮಾರ್ಚ್ 28) ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ, ಜನರ ಸುಲಿಗೆ ಯಾವ ರೀತಿ ಆಗುತ್ತಿದೆ ಎಂಬ ಬಗ್ಗೆ ಗಮನಸೆಳೆದಿದ್ದಾರೆ.

"ಎರಡು ವರ್ಷಗಳ ಸರಣಿ ಸುಲಿಗೆ!, ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಎರಡು ವರ್ಷದಲ್ಲಿ 3ನೇ ಸಲ ಹಾಲಿನ ದರ ಏರಿಕೆ ಮಾಡಿದ ಕಾರಣ ಹಾಲು ಹಾಲಾಹಲವಾಯಿತು. 2023ರ ಆಗಸ್ಟ್‌ನಲ್ಲಿ 3 ರೂಪಾಯಿ, 2024ರ ಜೂನ್‌ನಲ್ಲಿ 2 ರೂಪಾಯಿ, 2025ರಲ...