ಭಾರತ, ಏಪ್ರಿಲ್ 5 -- Lanka India: ಭಾರತದ ಭದ್ರತೆಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಅಡ್ಡಿ ಉಂಟುಮಾಡುವ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಲಂಕಾ ನೆಲ ಲಭ್ಯವಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸನಾಯಕೆ ಶನಿವಾರ (ಏಪ್ರಿಲ್ 5) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಅವರ ಈ ಘೋಷಣೆ ಸದ್ಯದ ಜಾಗತಿಕ ವಿದ್ಯಮಾನಗಳ ಕಾರಣದಿಂದ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಚೀನಾಕ್ಕೆ ನಾಲ್ಕು ದಿನಗಳ ಪ್ರವಾಸ ಹೋಗಿದ್ದ ವೇಳೆ, ಭಾರತದ ಈಶಾನ್ಯ ರಾಜ್ಯಗಳು ಬಂಧಿತ ರಾಜ್ಯಗಳು. ಬಾಂಗ್ಲಾದೇಶದಲ್ಲಿ ಚೀನಾ ಹೂಡಿಕೆ ಮಾಡಿದರೆ ಹಿಂದೂ ಮಹಾಸಾಗರಕ್ಕೆ ನೇರ ಪ್ರವೇಶ ಪಡೆಯಬಹುದು ಎಂದು ಹೇಳಿಕೆ ನೀಡಿ ಪ್ರಾದೇಶಿಕ ಕಳವಳ ಹುಟ್ಟುಹಾಕಿದ್ದರು.

ಬದಲಾಗುತ್ತಿರುವ ಜಾಗತಿಕ ವಿದ್ಯಮಾನದ ನಡುವೆ, ಥೈಲ್ಯಾಂಡ್‌ನಲ್ಲಿ ಬಿಮ್‌ಸ್ಟೆಕ್‌ ಶೃಂಗದ ವೇಳೆ ಬಾಂಗ್ಲಾದೇಶದ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದ ಭಾರತದ ಪ್ರಧಾನಿ ನರೇಂ...