ಭಾರತ, ಮಾರ್ಚ್ 30 -- Myanmar earthquake: ಮ್ಯಾನ್ಮಾರ್ನಲ್ಲಿ ಶುಕ್ರವಾರ ನಡೆದ 7.7 ತೀವ್ರತೆಯ ಭೂಕಂಪದ ನಂತರ ಅಲ್ಲಿ ಪಾರುಗಾಣಿಕಾ ಪ್ರಯತ್ನಗಳು ಮುಂದುವರಿದೆ. ಸಾವಿನ ಸಂಖ್ಯೆ 1,644 ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ 3,408 ಕ್ಕೆ ಏರಿಕೆಯಾಗಿದೆ. ಕನಿಷ್ಠ 139 ಇತರರು ಕಾಣೆಯಾಗಿದ್ದು, ಅವರ ಶೋಧ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ, ಮ್ಯಾನ್ಮಾರ್ನ ಸೇನಾಡಳಿತದ ಜತೆಗೆ ಸಂಘರ್ಷ ನಡೆಸುತ್ತಿದ್ದ ನ್ಯಾಷನಲ್ ಯೂನಿಟಿ ಗವರ್ನಮೆಂಟ್ ಶನಿವಾರ ಏಕಪಕ್ಷೀಯ ಕದನ ವಿರಾಮ ಘೋಷಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದೆ. ಆಂಗ್ ಸಾನ್ ಸುಕಿ ಅವರ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ 2021ರ ಫೆಬ್ರವರಿಯಿಂದ ಮ್ಯಾನ್ಮಾರ್ ಸೇನೆಯು ನಾಗರಿಕ ಕ್ರಾಂತಿಯನ್ನು ಎದುರಿಸುತ್ತಿದೆ. ಪೀಪಲ್ಸ್ ಡಿಫೆನ್ಸ್ ಫೋರ್ಸ್ ಮತ್ತು ಜನಾಂಗೀಯ ಸಶಸ್ತ್ರ ಪಡೆಗಳ ವಿರೋಧವನ್ನು ಎದುರಿಸುತ್ತಿದ್ದು ಫೈಟಿಂಗ್ ನಡೆಸುತ್ತ ಬಂದಿದೆ. ಮ್ಯಾನ್ಮಾರ್ ಭೂಕಂಪದ ಬಳಿಕ ಇದ...
Click here to read full article from source
To read the full article or to get the complete feed from this publication, please
Contact Us.