ಭಾರತ, ಮೇ 6 -- ಬೆಂಗಳೂರು: ಭಾರತದಾದ್ಯಂತ ಐಪಿಎಲ್‌ ಕ್ರೇಜ್‌ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳ ಸಂಖ್ಯೆ ದೊಡ್ಡದಿದ್ದು, ತಂಡದ ಗೆಲವನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುತ್ತಾರೆ. ಅಭಿಮಾನ ಒಳ್ಳೆಯದೇ, ಆದರೆ ಅತಿಯಾದರೆ ಅಮೃತವೂ ವಿಷ ಎಂಬುದು ಸತ್ಯ. ಇದಕ್ಕೆ ಈ ಘಟನೆಯೇ ಸಾಕ್ಷಿ. ಇತ್ತೀಚೆಗೆ (ಮೇ 3) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಆರ್‌ಸಿಬಿ ತಂಡವು 2 ರನ್‌ಗಳಿಂದ ರೋಚಕವಾಗಿ ಗೆದ್ದು ಬೀಗಿತು. ಇದು ಫ್ಯಾನ್ಸ್‌ ಉತ್ಸಾಹ ಮತ್ತು ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಆರ್‌ಸಿಬಿ ಪಂದ್ಯ ಗೆದ್ದಿದ್ದಕ್ಕೆ ವಿಚಿತ್ರ ಸಂಭ್ರಮಾಚರಣೆ ಮಾಡಿದ ಯುವಕರ ಗುಂಪು ಈಗ ಸಂಕಷ್ಟದಲ್ಲಿದೆ. ಸಿಎಸ್‌ಕೆ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದ್ದಕ್ಕೆ, ವಿರಾಟ್‌ ಕೊಹ್ಲಿ ಕಟೌಟ್‌ ಮುಂದೆ ಅಭಿಮಾನಿಗಳು ಮೇಕೆಯನ್ನು ಬಲಿಕೊಟ್ಟು ವಿಕೃತಿ ಮೆರೆದಿದ್ದಾರೆ. ಚಿತ್ರದುರ್ಗ ...