ಭಾರತ, ಮೇ 26 -- ಬಹುಭಾಷಾ ಚಿತ್ರನಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿರುವುದು ಈಗ ವಿವಾದವಾಗಿದೆ. ಕೆಎಸ್‌ಡಿಎಲ್‌ನ ಈ ನಿರ್ಧಾರಕ್ಕೆ ವ್ಯಕ್ತವಾಗಿರುವ ಆಕ್ಷೇಪಗಳು ಈ ಕೆಳಕಂಡಂತಿವೆ. 1. ಕನ್ನಡದ ನಟಿಯರನ್ನು ಬಿಟ್ಟು ಬೇರೆ ರಾಜ್ಯದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದು, ಕನ್ನಡದ ಅಸ್ಮಿತೆಗೆ ಧಕ್ಕೆ. 2. ಎರಡು ವರ್ಷಕ್ಕೆ ಆರೂವರೆ ಕೋಟಿ ರೂ. ನೀಡಿರುವುದು ಕರ್ನಾಟಕದ ತೆರಿಗೆದಾರರ ಹಣದ ಅಪವ್ಯಯ.

ಇದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಉತ್ತರ ನೀಡಿದ್ದಾರೆ. ನಾನು ಕನ್ನಡದವನು, ಅಸ್ಮಿತೆ ಗೊತ್ತಿದೆ ಎನ್ನುವ ಮಾತುಗಳನ್ನು ಬಿಟ್ಟು ನಿಜವಾದ ಔದ್ಯಮಿಕ ಮಾತುಗಳನ್ನು ನೋಡಬಹುದು. ಮೊದಲ ಪ್ರಶ್ನೆಗೆ ಅವರ ಉತ್ತರ ಹೀಗಿದೆ. ʼತಮನ್ನಾ ಅವರನ್ನು ನೇಮಿಸಿಕೊಳ್ಳುವ ಮೊದಲು ನಾವು ಕನ್ನಡದವರೇ ಆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದೆವು. ಜೊತೆಗೆ ಶ್ರೀಲ...