Bengaluru, ಮೇ 3 -- ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದ ಜನ
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಹಲಸಿನ ಮೇಳ
ಎರಡು ದಿನಗಳ ಹಲಸಿನ ಮೇಳದಲ್ಲಿ ಕರ್ನಾಟಕದ ಹೆಮ್ಮೆಯ ಹಲಸಿನ ತಳಿಗಳಾದ ತೂಬಗೆರೆ ಕೆಂಪು, ಪ್ರಕಾಶ್ ಚಂದ್ರ, ರುದ್ರಾಕ್ಷಿ, ಶಂಕರ, ಸಿದ್ದು ಹಲಸು, ಹನಿಜಾಕ್, ಲಾಲ್ಬಾಗ್ ಮಧುರ, ರಾಮಚಂದ್ರ, ಚಂದ್ರ ಹಲಸು, ಅಂಬಲಿ ಹಲಸು, ಸದಾನಂದ, ಸರ್ವಋತು, ಅಂಟು ರಹಿತ ಹಲಸು ಸೇರಿದಂತೆ 25ಕ್ಕೂ ಹೆಚ್ಚಿನ ಹಲಸು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಜತೆಗೆ ಜೇನು ಹಲಸು, ಬಿಳಿ ಹಲಸು, ಸಕ್ಕರಾಯಪಟ್ಟಣ ಹಲಸು, ಕಲ್ಲು ಹಲಸು, ಶಂಖು ಹಲಸು, ಕಪ್ಪುಚುಕ್ಕೆ ಹಲಸು, ಏಕಾದಶಿ ಹಲಸು, ಪಲ್ಯದ ಹಲಸು, ಬೆಟ್ಟದ ಹಲಸು, ನಾಗಚಂದ್ರ ಹಲಸುಗಳ ಪ್ರದರ್ಶನವೂ...
Click here to read full article from source
To read the full article or to get the complete feed from this publication, please
Contact Us.