Mysuru, ಏಪ್ರಿಲ್ 29 -- ಮೈಸೂರಿನಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಬಿದ್ದುಒಂಟಿಕೊಪ್ಪಲ್ ಪೊಲೀಸ್ ಠಾಣೆ ಸರ್ಕಲ್. ಬಳಿ ಒಂದು ಸಿಟಿ ಬಸ್ ಮತ್ತು ಒಂದು ಕಾರಿನ ಮೇಲೆ ಮರ ಬಿದ್ದಿದೆ.

ಮೈಸೂರಿನ ಯಾದವಗಿರಿಯ ರಾಮಕೃಷ್ಣ ಆಶ್ರಮದ ಬಳಿಯೂ ರಾತ್ರಿ ಭಾರೀ ಮಳೆಯೇ ಸುರಿಯಿತು.

ಮೈಸೂರು ನಗರದ ಟಿಕೆ ಬಡಾವಣೆಯಲ್ಲಿ ಮಂಗಳವಾರ ಸಂಜೆ ಎಡಬಿಡದೇ ಮಳೆ ಸುರಿಯಿತು.

ಸಂಜೆಯಿಂದಲೇ ಮೋಡ ಕವಿದ ವಾತಾರವಣವಿದ್ದು ರಾತ್ರಿ ಹೊತ್ತಿಗೆ ಭಾರೀ ಮಳೆ ಸುರಿಯುವ ಮುನ್ಸೂಚನೆಯಿತ್ತು.,

ಕೆಲ ಹೊತ್ತಿನಲ್ಲಿ ಮಳೆಯೂ ಶುರುವಾಗಿ ಜೋರಾಗಿ ಸುರಿಯತೊಡಗಿತು. ಭಾರೀ ಪ್ರಮಾಣದ ಗುಡುಗಿನ ಸದ್ದು. ಸಿಡಿಲಿನ ನಡುವೆ ಮಳೆಯಾಗುತ್ತಲೇ ಇದೆ.

ಮೈಸೂರಿನ ಹಲವು ಬಡಾವಣೆಗಳಲ್ಲಿ ಮಳೆ ಸುರಿದಿದ್ದರಿಂದ ಜನ ಹೊರ ಬರಲು ಆಗಲಿಲ್ಲ.

ಮೈಸೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ಹರಿದು ಜನ ಸಂಚಾರಕ್ಕೂ ತೊಂದರೆಯಾಯಿತು.

ಮೈಸೂರಿನ ಚಾಮುಂಡಿಬೆಟ್ಟ ಭಾಗದಲ್ಲೂ ಮೋಡದ ವಾತಾವರಣ, ಭಾರೀ ಮಳೆ ಸನ್ನಿವೇಶವೇ ಕಂಡು ಬಂದಿತು.

ಮೈಸೂರಿನಲ್ಲಿ ಮಂಗಳವಾರದಂದು ಹಲವು ಕಡ...