Mysuru, ಮೇ 3 -- ಮೈಸೂರು: ವಾಸನೆ ಎಂದು ಮೂಗು ಮುರಿದವರು, ಅಂಟು ಎಂದು ಹಲಸನ್ನು ಜರಿದವರು, ಹೊಟ್ಟೆ ನೋವಿನ ಹಣ್ಣು ಎಂದು ನಿರ್ಲಕ್ಷ್ಯ ಮಾಡಿದವರು ಈಗ ಹಲಸನ್ನು ಹಾಡಿ ಹೊಗಳುವ ಕಾಲ ಬಂದಿದೆ. ಜೇನು ಸವಿದಂತೆನಿಸುವ ಹಲಸು, ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದರ ಘಮಲು ನಮ್ಮ ಮನೆ ಮನಗಳಲ್ಲಿ ಸದಾ ಹರಡಬೇಕು. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಬೆಳೆಯಬಹುದಾದ ಹಲಸು ಬಯಲುಸೀಮೆ ಹಳ್ಳಿಗರ ಕಲ್ಪವೃಕ್ಷ. ಬದಲಾದ ವಾತಾವರಣ ಮತ್ತು ಮಳೆಗಾಲಕ್ಕೆ ಹೊಂದಿಕೊಂಡು ಬೆಳೆಯುವ ಸಾಮರ್ಥ್ಯವಿರುವ ಹಲಸು ಭವಿಷ್ಯದ ಬೆಳೆಯಾಗಿದೆ ಎನ್ನುವುದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆಸರಾಂತ ಬರಹಗಾರ ಮತ್ತು ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯ.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಎರಡು ದಿನಗಳ ಹಲಸಿನ ಮೇಳವನ್ನು ಕೃಷ್ಣಮೂರ್ತಿ ಬಿಳಿಗೆರೆ ಅವರು ಉದ್ಘಾಟಿಸಿ ಮಾತನಾಡಿದರ...