ಭಾರತ, ಮೇ 14 -- ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ವಿವಿಧೆಡೆ ಇಂದು ಗುರುವಾರ (ಮೇ 15) ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮೇ 15 ರಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ನೀರಿನ ಅದಾಲತ್ನ್ನು ನಡೆಸುವುದಾಗಿ ತಿಳಿಸಿದೆ.
ಬೆಂಗಳೂರು ಜಲ ಮಂಡಳಿಯ ವಾಯವ್ಯ-2, ವಾಯವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2-2, ನೈಋತ್ಯ -2, ನೈಋತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನಾಳೆ (ಮೇ 15) ಬೆಳಿಗ್ಗೆ 9.30 ರಿಂದ 11 ಗಂಟೆ ತನಕ ನೀರಿನ ಅದಾಲತ್ ನಡೆಯಲಿದೆ.
ನೀರಿನ ಅದಾಲತ್ ಸೇವಾಠಾಣೆಗಳು ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ...
Click here to read full article from source
To read the full article or to get the complete feed from this publication, please
Contact Us.