ಭಾರತ, ಮೇ 14 -- ಸಾವಿರಾರು ಜನ ರಾಜ್ಯ ಮತ್ತು ಹೊರರಾಜ್ಯದ ಚಿಂತಕರು, ಸಾಹಿತಿಗಳು, ಸಾಹಿತ್ಯಾಸಕ್ತರು, ಹೋರಾಟಗಾರರು, ಕಾರ್ಯಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಮೊದಲ ದಿನ, ಮೇ 17ರಂದು ಪುಸ್ತಕ ಮಳಿಗೆ ಉದ್ಘಾಟನೆ, ಹಾಗೂ ಉದ್ಘಾಟನಾ ಗೋಷ್ಠಿ ನಡೆಯಲಿದೆ.

ಅದೇ ದಿನ ಮಧ್ಯಾಹ್ನ ರಂಗಪ್ರಸ್ತುತಿ 'ನಾ ಯಾರು' ನಡೆಯಲಿದೆ. 'ಅಸಮಾನತೆ ಮತ್ತು ಸಂಘರ್ಷ: ಹೊರಳು ನೋಟ' ವಿಷಯವಾಗಿ ಮೊದಲ ಗೋಷ್ಠಿ ನಡೆಯಲಿದೆ. ಆ ಬಳಿಕ 'ದಮನದ ಸ್ವರೂಪಗಳು' ಹಾಗೂ 'ಹೋರಾಟಗಾರ ಜೀವಗಳೊಂದಿಗೆ ಸಂವಾದ' ಗೋಷ್ಠಿಗಳು ನಡೆಯಲಿವೆ.

ಸಂಜೆಯ ನಂತರ 'ನನ್ನ ಹಾಡು ನನ್ನ ಬದುಕು' ಗೋಷ್ಠಿ ನಡೆದರೆ, ಆ ಬಳಿಕ ಕವಿಗೋಷ್ಠಿ ನಡೆಯಲಿದೆ. ಎರಡನೇ ದಿನವಾದ ಮೇ 18ರಂದು ಬೆಳಗ್ಗೆ ಎರಡನೇ ಕವಿಗೋಷ್ಠಿ ನಡೆಯಲಿದೆ.

ನಂತರ 'ಅಭಿವೃದ್ಧಿಯ ಸತ್ಯ-ಮಿಥ್ಯೆ', 'ದಮನ: ಅನುಭವವಾಗಿ', 'ಐಕ್ಯ ಚಳವಳಿ: ಯಾತಕ್ಕಾಗಿ, ಯಾರ ಜೊತೆ', ಈ ಮೂರು ಗೋಷ್ಠಿಗಳು ನಡೆಯಲಿದೆ. ಸಂಜೆ 4 ಗಂಟೆಯ ನಂತರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿದೆ.

ಕಾರ್ಯಕ್ರಮದಲ್ಲಿ ಒಟ್ಟ...